ಮಂಗಳೂರು :  ವೀಕೆಂಡ್ ಕರ್ಫ್ಯೂ ; ಜು. 3 ಮತ್ತು 4 ರಂದು ಖಾಸಗಿ ಬಸ್ ಓಡಾಟ ಇಲ್ಲ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ವೀಕೆಂಡ್ ಕರ್ಫ್ಯೂ ; ಜು. 3 ಮತ್ತು 4 ರಂದು ಖಾಸಗಿ ಬಸ್ ಓಡಾಟ ಇಲ್ಲ -Vishwanews24

ಮಂಗಳೂರು : ಜಿಲ್ಲಾಡಳಿತ ಹೇರಿದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಖಾಸಗಿ ನಗರ ಬಸ್ ಮಾಲೀಕರು ಜುಲೈ 3 ಮತ್ತು ಜುಲೈ 4 ರಂದು ಬಸ್ಸುಗಳನ್ನು ಓಡಿಸದಿರಲು ನಿರ್ಧರಿಸಿದ್ದಾರೆ.

ಜುಲೈ 1 ರ ಗುರುವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಸ್ಸುಗಳನ್ನು ಓಡಿಸಲು ಅನುಮತಿ ನೀಡಿರುವುದು ತಿಳಿಸಿದ್ದು, ಜುಲೈ 3 ಮತ್ತು 4 ರಂದು ನಗರದಲ್ಲಿ ಬಸ್ಸುಗಳನ್ನು ಓಡಿಸುವುದಿಲ್ಲ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾ‌ಜ್ ಆಳ್ವ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಅರುಣ್ ಕುಮಾರ್ ಅವರು  ಮಾಹಿತಿ ನೀಡಿದ್ದಾರೆ.