ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ  : ಪೇಜಾವರ ಶ್ರೀ  – Vishwnaews24

Featured, ರಾಜ್ಯ ನ್ಯೂಸ್

ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ  : ಪೇಜಾವರ ಶ್ರೀ 

ಹಾಸನ : ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ-ಮನೆಗಳಲ್ಲಿ ಅವಾಂತರವನ್ನು ಎಬ್ಬಿಸುತ್ತ ಇತ್ತು; ಅನೇಕ ಮನೆಗಳಲ್ಲಿ ಗಂಡ ಹೆಂಡತಿಯರನ್ನು ಬೇರ್ಪಡಿಸುವಂತಹ ಕೆಟ್ಟ ಕಾರ್ಯ ಮತಾಂತರದಿಂದ ನಡೆಯುತ್ತಿದ್ದು ಮನೆಯೊಳಗೆ ಮಕ್ಕಳು ಬೇರೆ ಅಪ್ಪ ಅಮ್ಮಂದಿರೇ ಬೇರೆ ಆಗುತ್ತಿದ್ದರು ಎಂದರು.

ಕುಟುಂಬದಲ್ಲಿ ಅವರ ಒಳಗೆ ವೈಮನಸ್ಸು ತರುವಂತಹ ಕಾರ್ಯಗಳು ನಡೆಯುತ್ತಿದೆ. ಸರ್ಕಾರದ ಇಂತಹ ನಿರ್ಧಾರದಿಂದ ಮತಾಂತರ ದಂತಹ ಹಾವಳಿಯನ್ನು ದೂರ ಮಾಡುವುದಕ್ಕೆ ಅನುಕೂಲವಾಗುವಂತೆ ಕಾಯ್ದೆ ತಂದಿದ್ದು ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ : ಸಚಿವ ಕೋಟ ಸ್ಪಷ್ಟನೆ – VIshwnaews24

Leave a Reply