ರಾಜ್ಯದಲ್ಲಿ ‘JDS’ ಅಧಿಕಾರಕ್ಕೆ ಬಂದ್ರೆ ‘ಗೋ ಮಾಂಸ’ ವ್ಯಾಪಾರಕ್ಕೆ ಅವಕಾಶ : ಸಿಎಂ ಇಬ್ರಾಹಿಂ – Vishwanews24
ರಾಜ್ಯದಲ್ಲಿ ಗೋ ಹತ್ಯೆ ನಿಷೇಧದಿಂದ ಜನರು ಕಂಗಾಲಾಗಿದ್ದಾರೆ : ಸಿಎಂ ಇಬ್ರಾಹಿಂ
ಹುಮನಾಬಾದ್ : ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಗೋ ಹತ್ಯೆ ನಿಷೇಧದಿಂದ ಜನರು ಕಂಗಾಲಾಗಿದ್ದಾರೆ.
ಹೈನುಗಾರಿಕೆಗಾಗಿ ಸಾವಿರಗಟ್ಟಲೇ ಹಣ ನೀಡಿ ಹಸುಗಳನ್ನು ತಂದು ಹಾಲು ಕೊಡದಿದ್ದರೆ ಏನು ಮಾಡಬೇಕು, ಈ ಕಾಯಿದೆ ಜಾರಿಗೆ ಇರುವುದರಿಂದ ರೈತರು ಯಾರಿಗೆ ಹಸು ಮಾರಾಟ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ನಾವು ಪರವಾನಗಿ ನೀಡುತ್ತೇವೆ ಎಂದು ಸಿಎಂ ಇಬ್ರಾಹಿಂ ಹೇಳಿದರು., ಮಣಿಪುರದ ಬಿಜೆಪಿ ಸಚಿವರೊಬ್ಬರು ನಾನು ಗೋಮಾಂಸ ತಿನ್ನುತ್ತಾರೆ ಎಂದು ಹೇಳುತ್ತಾರೆ, ಇದಕ್ಕೆ ಬಿಜೆಪಿಯವರು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.
