ಉಡುಪಿ: ಪಂಚ ಮಹಾ ಶಕ್ತಿಗಳ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಧರ್ಮಧರ್ಶಿ ಭಾಸ್ಕರ ಪೂಜಾರಿ ಗುಂಡಿಬೈಲ್ ಇವರ ಮಾರ್ಗದರ್ಶನದಲ್ಲಿ ಮಹಾಚಂಡಿಕಯಾಗ ನಡೆಯಿತು.
ಕೋಡಿಮಠದ ಶ್ರೀಗಳು ಕೊರೋನಾ ಮಹಾಮಾರಿಯ ನಿವಾರಣೆಗಾಗಿ ಶ್ರೀ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ಚಂಡಿಕಯಾಗ ಮಾಡಿಸಬೇಕೆಂಬ ನುಡಿಯಂತೆ ಆದಿತ್ಯವಾರ ಕೇವಲ ಕ್ಷೇತ್ರದ ಧರ್ಮದರ್ಶಿ ಮತ್ತು ಕಮಿಟಿ ಸದಸ್ಯರ ಸಮ್ಮುಖದಲ್ಲಿ ಲಾಕ್-ಡೌನ್ ಉಲ್ಲಂಘಿಸದೆ ಸೇವೆ ನಡೆಸಲಾಯಿತು.
ಈ ಸಂದರ್ಭ ಧರ್ಮದರ್ಶಿಗಳಾದ ಭಾಸ್ಕರ ಗುಂಡಿಬೈಲ್ ಮಾತಾಡಿ ” ಕಳೆದ ದಿನಗಳ ಹಿಂದೆ ಕ್ಷೇತ್ರದ ಜೀರ್ಣೋದ್ಧಾರದ ವಿಚಾರವಾಗಿ ಶ್ರೀ ಕೋಡಿ ಮಠದ ಶ್ರೀಗಳನ್ನು ಸಂಪರ್ಕಿಸಿದಾಗ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ತಾರೀಖು 12 ರಂದು ಚಂಡಿಕಯಾಗ ನಡೆಸಬೇಕು ಆ ಸಮಯದಲ್ಲಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಜಾಗದಲ್ಲಿ ಕೊರೋನಾ ರೋಗದ ಅಟ್ಟಹಾಸ ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದ ನುಡಿಯ ಪ್ರಕಾರ ಒಂದು ತಿಂಗಳ ಹಿಂದೆ ದಿನ ನಿಗದಿ ಪಡಿಸಿದ್ದೇವು.ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೇವು, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಇಲ್ಲ ಮತ್ತು ಇದ್ದ ಮೂವರು ಗುಣಮುಖರಾಗಿದ್ದಾರೆ ಇದೆಲ್ಲವೂ ತಾಯಿ ತ್ರಿಪುರಾಂಭಿಕೆಯ ಶಕ್ತಿ ಎಂದರು.”
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…