ವಿಶಾಖಪಟ್ಟಣ : ಮೀನುಗಾರರ ಬಲೆಗೆ ಬಿದ್ದ ಅಪಾಯಕಾರಿ ಹಾವು – Vishwanews24

Featured, ರಾಷ್ಟ್ರ ನ್ಯೂಸ್

ವಿಶಾಖಪಟ್ಟಣ : ಮೀನುಗಾರರ ಬಲೆಗೆ ಬಿದ್ದ ಅಪಾಯಕಾರಿ ಹಾವು..

ವಿಶಾಖಪಟ್ಟಣ,: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್​ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.

ಮೊದ ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು ಅದನ್ನು ಹತ್ತಿರದಿಂದ ನೋಡಿದ ಬಳಿಕ ನಿಬ್ಬೆರಗಾಗಿದ್ದಾರೆ. ಬಳಿಕ ಆ ಮೀನನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು. ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದು, ಅದೊಂದು ಅಪಾಯಕಾರಿ ಹಾವು ಎಂದಿದ್ದಾರೆ. ಅದರ ವೈಜ್ಞಾನಿಕ ಹೆಸರು ‘ಹೈಡ್ರೋಫಿಸ್ ಗ್ರಾಸಿಲಿಸ್’ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ : ಸಿಎಂ ಬೊಮ್ಮಾಯಿ  – Vishwanews24

ಈ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯವಾಗಿ ಸಮುದ್ರ ಹಾವೆಂದು ಮೀನುಗಾರರು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುಳಿಯುತ್ತವೆ. ಆಹಾರವನ್ನು ಹುಡುಕಾಡುವ ಸಂದರ್ಭದಲ್ಲಿ ಈ ಹಾವು ಮೀನುಗಾರರ ಬಲೆಗೆ ಸಿಲುಕಿದೆ ಎನ್ನಲಾಗಿದೆ.

ಇನ್ನು ಈ ಹಾವು ಸಮುದ್ರದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತದೆ. ಅಂದರೆ, ಕಣ್ಣು ಮಿಟುಕಿಸುವುದರಲ್ಲಿ ನಮ್ಮಿಂದ ಮಾಯವಾಗಿಬಿಡುತ್ತವೆಯಂತೆ. ಈ ಹಾವೇನಾದರೂ ಕಡಿದರೆ, ತಕ್ಷಣ ವೈದ್ಯರ ನೆರವು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಬಹು ಬೇಗ ಸಾವು ಸಂಭವಿಸುತ್ತದೆ. ಈ ಹಾವು ಮುಂಜಾನೆ ಮೀನಿನ ಬಲೆಗೆ ಬಿದ್ದಿದೆ. ರಾತ್ರಿಯಾಗಿದ್ದರೆ ಕಾಣುತ್ತಿರಲಿಲ್ಲ. ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಸದ್ಯ ಗೊತ್ತಾಗಿದ್ದು, ಒಳ್ಳೆಯದಾಯಿತು ಎಂದು ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜಾನುವಾರುಗಳಿಗೆ ಚರ್ಮಗಂಟು ರೋಗ –  ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ನಿಷೇಧ : ಜಿಲ್ಲಾಧಿಕಾರಿ ಆರ್.ಲತಾ ಆದೇಶ  – Vishwanews24

Leave a Reply