ವಿಶ್ವಕರ್ಮ ಸಮಾಜವನ್ನು ಇಬ್ಬಾಗಿಸುವ ಯತ್ನ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ತಿರುಗಿಬಿದ್ದ ವಿಶ್ವಕರ್ಮ ಸಮಾಜ : Vishwanews24
ವಿಶ್ವಕರ್ಮ ಸಮಾಜವನ್ನು ಇಬ್ಬಾಗಿಸುವ ಯತ್ನ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ತಿರುಗಿಬಿದ್ದ ವಿಶ್ವಕರ್ಮ ಸಮಾಜ:Vishwanews24
ಉಡುಪಿ : ಶಾಸಕ ಕೆ.ಪಿ. ನಂಜುಂಡಿ ವಿಶ್ವಕರ್ಮ ರವರ ನಾಯಕತ್ವದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆ ಬಲ ಮಾಡಿರುವ ವಿಚಾರ ಎಲ್ಲಾರಿಗೂ ಗೊತ್ತಿದೆ ಆದರೆ ಸದ್ಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತ್ರ ವಿಶ್ವಕರ್ಮ ಸಮಾಜವನ್ನು ಇಭ್ಭಾಗ ಮಾಡಲು ಯತ್ನಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಎ.ಸಿ.ಬಿ ವಿಚಾರಣೆ ಎದುರಿಸುತ್ತಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ದ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಾಬು ಪತ್ತಾರ ಮೂಲಕ ಮಠಗಳಿಗೆ ಅನುದಾನ ನೀಡುವುದಾಗಿ ಆಮಿಷ ಒಡ್ಡಿ ದಿನಾಂಕ:24/06/2022 ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ನಡೆಸಿ ಸಮಾಜಕ್ಕೆ ಮುಜಗರ ತಂದಿದ್ದಾರೆ ಎಂದರು.

ಭಾರತೀಯ ಜನತಾ ಪಕ್ಷವು ಶಿಸ್ತಿನ ಪಕ್ಷವಾಗಿದ್ದು, ಅದೇ ಪಕ್ಷದಿಂದ ಶಾಸಕರಾಗಿ ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ ರವರು ಇರುವಾಗ ಅವರಿಗೆ ಆಹ್ವಾನ ನೀಡದೆ ಗುಟ್ಟಾಗಿ ಸಭೆಯನ್ನು ಮಾಡಿ ಪಕ್ಷಕ್ಕೆ ಹಾಗೂ ಸರ್ಕಾರದ ಶಿಷ್ಟಾಚಾರಕ್ಕೆ ಕಳಂಕ ತಂದಿರುತ್ತಾರೆ ಎಂದು ಅವರು ಆರೋಪಿಸಿದರು.

ಹಾಗಾಗಿ ಜಾತಿ ಜಾತಿಯೊಳಗೆ ಭಿನ್ನಮತ ಸೃಷ್ಟಿಸಿ ಒಂದು ಸಮುದಾಯವನ್ನು ಛಿದ್ರಗೊಳಿಸಲು ಯತ್ನಿಸುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು ಮಾತ್ರವಲ್ಲದೆ ಇನ್ನುಮುಂದಿನ ದಿನಗಳಲ್ಲಿ ಯಾವುದೇ ಸಮಾಜಗಳ ನಡುವೆ ಒಡಕು ಸೃಷ್ಟಿಸಬಾರದಾಗಿ ಕಡಕ್ ವಾರ್ನಿಂಗ್ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರು ಮಾಡಬೇಕು ಎಂದು ಕೋಟಾ ರಾಮಕೃಷ್ಣ ಆಚಾರ್ ಹೇಳಿದರು.

ವಿಶ್ವಕರ್ಮ ಸಮಾಜದಲ್ಲಿ ಸುಮಾರು 41 ಪಂಗಡಗಳಿದ್ದು ಅದರಲ್ಲಿ ಕೇವಲ ಎರಡು ಪಂಗಡದವರ ಜೊತೆ ಮಾತ್ರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿ ಉಳಿದ 39 ಪಂಗಡದವರಿಗೆ ಮಾಹಿತಿ ನೀಡದೆ ಇರುವುದು ಮತ್ತು ಕೆ.ಪಿ ನಂಜುಡಿಯ ಗಮನಕ್ಕೆ ತಾರದೇ ಈ ರೀತಿಯಾಗಿ ವರ್ತಿಸಿರುವುದು ಕೂಡ ಖಂಡನೀಯವಾಗಿದೆ.ಇದೇ ರೀತಿ ಮುಂದುವರಿದಲ್ಲಿ ಕರ್ನಾಟಕ ರಾಜ್ಯದೆಲ್ಲೆಡೆ ಸಚಿವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗುವುದೆಂದು ಯುವ ಘಟಕ ಅಧ್ಯಕ್ಷ ಕೋಟಾ ರಾಮಕೃಷ್ಣ ಅಚಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ್ ಆಚಾರ್ ಉದ್ದಲ್ ಗುಡ್ಡೆ,ರುಕ್ಮಿನಿ ರಮೇಶ್ ಅಚಾರ್,ನಾರಾಯಣ ಆಚಾರ್ ಬೈಂದೂರು ,ರೋಶನ್ ಆಚಾರ್ ಕೋಟಾ ಉಪಸ್ಥಿತರಿದ್ದರು.
