ಸಗ್ರಿಯಲ್ಲಿ ಪ್ರಾರಂಭವಾಗುತ್ತಿರುವ ಮಹೋತ್ಸವ ಇಡೀ ನಾಡಿಗೆ ಮಂಗಳವಾಗುವ ಶುಭೋತ್ಸವ:ಪುತ್ತಿಗೆ ಶ್ರೀ vishwanews24

Featured, ಉಡುಪಿ

ಸಗ್ರಿಯಲ್ಲಿ ಪ್ರಾರಂಭವಾಗುತ್ತಿರುವ ಮಹೋತ್ಸವ ಇಡೀ ನಾಡಿಗೆ ಮಂಗಳವಾಗುವ ಶುಭೋತ್ಸವ:ಪುತ್ತಿಗೆ ಶ್ರೀ vishwanews24

ಉಡುಪಿ: ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ನವೀಕೃತ ನಾಗಸನ್ನಿಧಾನ ಸಮರ್ಪಣೆ,ಅಷ್ಠಬಂಧ ಬ್ರಹ್ಮಕಲಶೋತ್ಸವ ನಾಗಮಂಡಳೋತ್ಸವದ ಪ್ರಯುಕ್ತ ಧರ್ಮಸಭೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿ”ಸಗ್ರಿಯಲ್ಲಿ ಪ್ರಾರಂಭವಾಗುತ್ತಿರುವ ಮಹೋತ್ಸವ ಇಡೀ ನಾಡಿಗೆ ಮಂಗಳವಾಗುವ ಶುಭೋತ್ಸವಾಗಿದೆ ,ನಾಗರಾಧನೆಯಿಂದಾಗಿ ನಾಡಿಗೆ ಮಂಗಳ ಉಂಟುಮಾಡುತ್ತದೆ ಹಾಗೇಯೆ ದೇಶ ಸೇವೆಯ ಮುಖಾಂತರ ಈಶ ಸೇವೆ ಮಾಡಬೇಕೆಂದರು.

ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಂಧರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ,ಉಡುಪಿ ನಗರಸಭಾಧ್ಯಕ್ಷ ಸುಮೀತ್ರ ನಾಯಕ್ ,ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೆಸರ ಸೂರ್ಯನಾರಾಯಣ,ಉಡುಪಿ ನಗರಸಭಾಧ್ಯಕ್ಷ ಗೀತಾ ಶೇಟ್ ಉಪಸ್ಥಿತರಿದ್ದರು.

Leave a Reply