ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೇ ಹೊರತು ಸಿಎಂ ಬದಲಾವಣೆ ಇಲ್ಲ : ಬಿ ಎಸ್ ಯಡಿಯೂರಪ್ಪ – Vishwanews24
ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೇ ಹೊರತು ಸಿಎಂ ಬದಲಾವಣೆ ಇಲ್ಲ : ಬಿ ಎಸ್ ಯಡಿಯೂರಪ್ಪ – Vishwanews24
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಿಎಂ ನಾಯಕತ್ವ ಬದಲಾಗದಿದ್ದರೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಆಗುವುದು ಬಹುತೇಕ ಖಚಿತ ಎಂಬುದು ಆ ಪಕ್ಷದ ಪ್ರಮುಖ ನಾಯಕರ ಮಾತುಗಳಿಂದಲೇ ಖಚಿತವಾಗುತ್ತಿದೆ.
ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಸಂಪುಟ ಸರ್ಜರಿ ಮಾಡಿಯೇ ದೆಹಲಿಗೆ ತೆರಳುತ್ತಾರೆ ಅಥವಾ ದೆಹಲಿಗೆ ಹೋದ ಕೂಡಲೇ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಅದಕ್ಕೆ ಪುಷ್ಟಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ.
ಅಮಿತ್ ಶಾ ಅವರನ್ನು ನಾನು ಇನ್ನೂ ಭೇಟಿ ಮಾಡಿಲ್ಲ, ಸಚಿವ ಸಂಪುಟ ವಿಸ್ತರಣೆ ಇನ್ನೆರಡು-ಮೂರು ದಿನಗಳಲ್ಲಿ ಆಗಬುಹುದು ಎಂಬ ವಿಶ್ವಾಸ ನನಗಿದೆ. ಆ ಬಗ್ಗೆ ಅಂತಿಮ ತೀರ್ಮಾನವನ್ನು ಅಮಿತ್ ಶಾ ತೆಗೆದುಕೊಂಡೇ ಇಲ್ಲಿಗೆ ಬಂದಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಯಡಿಯೂರಪ್ಪ ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಸಿಎಂ ಬದಲಾವಣೆ ಇಲ್ಲ: ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೇ ಹೊರತು ಸಿಎಂ ಬದಲಾವಣೆ ಇಲ್ಲ, ಅವುಗಳೆಲ್ಲ ಊಹಾಪೋಹಗಳಷ್ಟೆ ಎಂದರು.
