ಸರ್ವೇಶ್ವರ ಫ್ರೆಂಡ್ಸ್ ಮೂಳೂರು ವಿಜೃಂಭಣೆಯ ತುಡರ ಬಲಿ ಸೇವೆ ಸಂಪನ್ನ.
ಸರ್ವೇಶ್ವರ ಫ್ರೆಂಡ್ಸ್ ಮೂಳೂರು ವಿಜೃಂಭಣೆಯ ತುಡರ ಬಲಿ ಸೇವೆ ಸಂಪನ್ನ.
ಕಾಪು: ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮೂಳೂರು ಬೊಬ್ಬರ್ಯ ದೈವದ ಮೂಲಸ್ಥಾನ ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಸರ್ವೇಶ್ವರ ಫ್ರೆಂಡ್ಸ್ ಮೂಳೂರು ಇವರ ವತಿಯಿಂದ ನಡೆದ ತುಡರ ಬಲ ಸೇವೆ ಆದಿತ್ಯವಾರ ಸಂಪನ್ನಗೊಂಡಿತು.
ಬೆಳಗ್ಗೆ ನಾಗದೇವರಿಗೆ ವಿಶೇಷ ಪೂಜೆ ಹಾಗೂ ಐಯ್ಯಂಗಳ ಕಟ್ಟೆಯಲ್ಲಿ ವನದುರ್ಗಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ತದನಂತರ ಮೂಳೂರು ಬಿಲ್ಲವ ಸಂಘದಿಂದ ಶ್ರೀ ಕ್ಷೇತ್ರಕ್ಕೆ ಹೂಹಿಂಗಾರ ಮೆರವಣಿಗೆಯ ಬಳಿಕ ರಾತ್ರಿ ದರ್ಶನ ಸೇವೆಯೊಂದಿಗೆ ವಿಜೃಂಭಣೆಯ ತುಡರ ಬಲಿ ಸೇವೆ ಸಂಪನ್ನಗೊಂಡಿತು.
ಈ ಸಂಧರ್ಭದಲ್ಲಿ ಕ್ಷೇತ್ರದಲ್ಲಿ ದೈವಗಳ ಸೇವೆ (ಚಾಕಾರಿ) ಮಾಡುವ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಶಾಸಕವಿನಯ್ ಕುಮಾರ್ ಸೊರಕೆ,ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು, ಗುರ್ಮೆ ಸುರೇಶ್ ಶೆಟ್ಟಿ,ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ,ಗಂಗಾಧರ್ ಸುವರ್ಣ ಪುರಸಭಾ ಸದಸ್ಯ ಅನಿಲ್ ಕುಮಾರ್, ಕಾಪು ಲೀಲಾಧರ ಶೆಟ್ಟಿ ಮೊದಲಾದವರು ಆಗಮಿಸಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು
ವಿಶ್ವನ್ಯೂಸ್24

