ಸಿದ್ದರಾಮಯ್ಯ ವ್ಯಂಗ್ಯ ಟ್ವೀಟ್ ಗೆ ಖಡಕ್ ಉತ್ತರ ನೀಡಿದ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್

Featured, ರಾಜ್ಯ ನ್ಯೂಸ್

ಸಿದ್ದರಾಮಯ್ಯ ವ್ಯಂಗ್ಯ ಟ್ವೀಟ್ ಗೆ ಖಡಕ್ ಉತ್ತರ ನೀಡಿದ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಉಡುಪಿ: ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತಾಗಿ ಬಿಜೆಪಿ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಬೆನ್ನಲ್ಲೇ ಇದಕ್ಕೆ ಪ್ರತ್ಯುತ್ತರವಾಗಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಖಡಕ್ ಉತ್ತರ ನೀಡಿರುವ ಟ್ವಿಟರ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ ಅವರು ಟ್ವಿಟರ್ ನಲ್ಲಿ “ರಾಜ್ಯದ ಜನರ ಹಿತ ಕಾಪಾಡಲು
ವಿಫಲವಾಗಿರುವ @BSYBJP ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು @BJP4India ಹೈಕಮಾಂಡ್ ತಿಳಿದುಕೊಂಡಿದೆ.ಆದರೆ ಪೂರ್ತಿ ಬಸ್ ಕೆಟ್ಟುಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗದು” ಪ್ರಕಟಿಸಿದ್ದರು

ಇದಕ್ಕೆ ಪ್ರತ್ಯುತ್ತರವಾಗಿ ಸುರೇಶ್ ನಾಯಕ್ “ಸಿದ್ದಣ್ಣಾ, ಬಿಜೆಪಿಯ ಬಸ್ ಪೂರ್ತಿ ಕೆಟ್ಟು ಹೋಗಿದ್ರೆ ಬಸ್ ಚೇಂಜ್ ಮಾಡಬಹುದು ಯಾಕಂದ್ರೆ ಬಿಜೆಪಿ ಯಲ್ಲಿ ಪರ್ಮಿಟ್ (ಬಹುಮತ) ಇದೆ . ರಿಪೇರಿ ಮಾಡಬೇಕು ಅಂದ್ರೆ ಒಳ್ಳೆಯ ಗ್ಯಾರೇಜ್ (ಹೈಕಮಾಂಡ್). ಇದೆ ನಿಮ್ಮಲ್ಲಿ ಗುಜಿರಿ ಬಸ್ ಇದೆ ಪರ್ಮಿಟ್ ಇಲ್ಲಾ ನಿಮ್ ಗ್ಯಾರೇಜಿಗಂತೂ ಯಾರು ಬರಲ್ಲ ಆದುದರಿಂದ ನೀವು ಹಗಲು ಕನ್ನು ಕಾಣೋದು ಬೇಡ” ಎಂದು ಖಡಕ್ ಪ್ರತ್ಯುತ್ತರ ನೀಡಿದ್ದಾರೆ.


ಸದ್ಯ ಈ ಎರಡು ಟ್ವೀಟ್ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.