ಸುರತ್ಕಲ್ : ಮೀನಿಗೆ ಹಾಕಿದ್ದ ಬಲೆಗೆ ಸಿಲುಕಿ ಮೀನುಗಾರ ಸಾವು – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್ : ಮೀನಿಗೆ ಹಾಕಿದ್ದ ಬಲೆಗೆ ಸಿಲುಕಿ ಮೀನುಗಾರ ಸಾವು 

ಸುರತ್ಕಲ್: ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಜಯರಾಜ್ (46 ವರ್ಷ)ಮೃತ ಮೀನುಗಾರ. ಮಂಗಳವಾರ ಮುಸ್ಸಂಜೆ ಈ ಘಟನೆ ನಡೆದಿದೆ. ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ,ಬೃಹತ್ ತೆರೆಯೂ ಅಪ್ಪಳಿಸಿ ಮುಳುಗಿದರು ಎನ್ನಲಾಗಿದೆ.

ಸಹ ಮೀನುಗಾರ ತಕ್ಷಣ ಸ್ಥಳೀಯರಿಗೆ ತಿಳಿಸಿದ್ದು, ಸಹಾಯಕ್ಕೆ ಧಾವಿಸಿದ ಸ್ಥಳೀಯರು, ಜಯರಾಜ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮೃತರು ಪತ್ನಿ,ಮಗಳನ್ನು ಅಗಲಿದ್ದಾರೆ.

ಮುಲ್ಕಿ:  ತೀವ್ರ ಜ್ವರದಿಂದ ಯುವಕ ನಿಧನ – Vishwanews24

Leave a Reply