ಸೆಪ್ಟೆಂಬರ್ 7 ರಂದು ಪಡುಬಿದ್ರಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ -Vishwanews24
ಉಡುಪಿ:ದಿನಾಂಕ 07-09-2019 ನೇ ಶನಿವಾರ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಇದರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟವು ನಡೆಯಲಿರುವುದು.
17ರ ವಯೋಮಾನದ ಬಾಲಕ-ಬಾಲಕಿಯರು ಮತ್ತು 14 ರ ವಯೋಮಾನದ ಬಾಲಕ – ಬಾಲಕಿಯರ ವಿಭಾಗಗಳಲ್ಲಿ ಬೈಂದೂರು, ಕುಂದಾಪುರ, ಕಾರ್ಕಳ, ಉಡುಪಿ. ಬ್ರಹ್ಮಾವರ ವಲಯಗಳ ಒಟ್ಟು 20 ತಂಡಗಳು ಭಾಗವಹಿಸಲಿದೆ.
ಪಂದ್ಯಾಟವು ಮ್ಯಾಟಲ್ಲಿ ನಡೆಯಲಿದ್ದು, ಪ್ರತೀ ವಿಭಾಗಗಳಲ್ಲಿ ಗೆದ್ದ ತಂಡಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುವುದು. ಹಾಗೂ ಬೆಸ್ಟ್ ರೈಡರ್, ಬೆಸ್ಟ್ ಡಿಫೆಂಡರ್ ಹಾಗೂ ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಗೆದ್ದ ತಂಡಗಳು ಮೈಸೂರು ವಿಭಾಗ ಮಟ್ಟದ ಪಂದ್ಯಾಟಗಳಿಗೆ ಆಯ್ಕೆಯಾಗಿ ವಿಭಾಗ ಮಟ್ಟದಲ್ಲಿ ಪ್ರತಿನಿಧಿಸಲಿರುವರು.

ದಿನಾಂಕ 07.09.2019 ನೇ ಶನಿವಾರ ಬೆಳಿಗ್ಗೆ 9.30 ಕ್ಕೆ ಕಾಪು ವಿಧಾನ ಸಭಾ ಶಾಸಕರಾದ ಮಾನ್ಯ ಶ್ರೀ.ಲಾಲಾಜಿ ಆರ್ ಮೆಂಡನ್ ಅವರ ಅಮೃತ ಹಸ್ತದಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪಡುಬಿದ್ರಿ ಬೀಡಿನ ಅರಸರಾದ ರತ್ನಾಕರ್ ರಾಜ್ ಕಿನ್ಯಕ್ಕ ಬಲ್ಲಾಳ್, ಶ್ರೀ ಮನೋಹರ್ ಶೆಟ್ಟಿ, ಸಾಯಿರಾಧ ಗ್ರೂಪ್ಸ್ ಉಡುಪಿ, ಶ್ರೀಮತಿ ಗಾಯತ್ರಿ ರಾವ್, ದಾನಿಗಳು ಪಡುಬಿದ್ರಿ. ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀತಾ ಗುರುರಾಜ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಡುಪಿ ವಲಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್, ಉಡುಪಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಊರ ಪರ ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಸಾಗರ ವಿದ್ಯಾ ಮಂದಿರ ಪಡುಬಿದ್ರಿಯ ಸಂಚಾಲಕರಾದ ಸುಕುಮಾರ್ ಸಿ ಶ್ರೀಯಾನ್ ಕಾಪುವಿನಲ್ಲಿ ನಡೆದ ಪತ್ರೀಕಾಗೋಷ್ಠಿಯಲ್ಲಿ ತಿಳಿಸಿದರು.
ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ದಮಯಂತಿ ವಿ ಅಮೀನ್, ರಾಕೇಶ್ ಮಲ್ಲಿ, ರಾಜ್ಯ ಅಮೆಚ್ಯುರ್ ಕಬಡ್ಡಿ ಸಂಸ್ಥೆಯ ಚೇರ್ಮ್ಯಾನ್, ಕಿಶೋರ್ ಆಳ್ವ, ಅಧ್ಯಕ್ಷರು ಮತ್ತು ಜಂಟಿ ನಿರ್ದೇಶಕರು ಅದಾನಿ, ಉದ್ಯಮಿಯಾದ ರಕುವ್ವಾನಿ, ಪೂಣೆಯ ಉದ್ಯಮಿ ಶ್ರೀ ಎರ್ಮಾಳ್ ಚಂದ್ರಹಾಸ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಬಹುಮಾನ ವಿತರಣೆ ಮಾಡಲಿರುವರು.
ಪತ್ರೀಕಾಗೋಷ್ಠಿಯಲ್ಲಿ ರಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಎನ್ ಕೋಟ್ಯಾನ್ ,ಮುಖ್ಯೋಪಧ್ಯಾಯಿನಿ ಶ್ರೀಮತಿ ಪದ್ಮಶ್ರೀ ಸುರೇಶ್ ರಾವ್,ಮೊದಲಾದವರು ಉಪಸ್ಥಿತರಿದ್ದರು.
