ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿ:- ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ: Vishwanews24

Featured, ಉಡುಪಿ

ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿ:- ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ: Vishwanews24

ಕಾಪು: ಪಾಂಗಾಳ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ ,ದಿ/ ಪಿ.ಕೆ. ಸಂಜೀವ ಶೆಟ್ಟಿಯವರ ಧರ್ಮಪತ್ನಿ ದಿವಂಗತ ಕೃಷ್ಣ ಶೆಡ್ತಿ ಇವರ 15ನೇ ವರುಷದ ಪುಣ್ಯಸ್ಮರಣಾ ಕಾರ್ಯಕ್ರಮ ಆದಿತ್ಯವಾರ ಆರ್ಯಾಡಿ, ಪಾಂಗಾಳದಲ್ಲಿ ನಡೆಯಿತು.

ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಸಾಂದಿಪನಿ ಸಾಧನಾಶ್ರಮ ಇವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ಮಾಡುತ್ತಾ” ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿಯಾಗಿದೆ ಪ್ರತಿಯೊಬ್ಬ ಸಾಧಕನ‌ ಹಿಂದೆ ತಾಯಿಯ ಪಾತ್ರ ಮಹತ್ವದ್ದಾಗಿದೆ ಇದು ಪುರಾಣದಲ್ಲಿಯೂ ಉಲ್ಲೇಖಿಸಿದ ವಿಚಾರವಾಗಿದೆ.
ತಾಯಿಯ ಪ್ರೀತಿಯ ಬಗ್ಗೆ ಉದ್ದ ಎಷ್ಟು ಅಗಲ ಎಷ್ಟು ಎಂಬುದನ್ನು ಅಳತೆ ಮಾಡಲು ಸಾಧ್ಯವೇ ಇಲ್ಲ ಹಾಗಾಗಿ ತಾಯಿಯೇ ನಿಜವಾದ ದೇವರು ಎಂದರು.

ಕಾಪುವಿನ ಶಾಸಕ ಲಾಲಾಜಿ. ಆರ್. ಮೆಂಡನ್ ಮಾತನಾಡಿ ” ಅಮ್ಮಂದಿರ ದಿನದಂದು ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು ಇದರ ಜತೆಗೆ ಅಶಕ್ತರನ್ನ ಗುರುತಿಸಿ ಸಹಕರಿಸಿರುವುದು ಇಹಲೋಕದ ದಿ.ಕೃಷ್ಣಿ ಶೆಟ್ಟಿ ಅವರಿಗೆ ವಿಶೇಷವಾಗಿ ನೀಡುತ್ತಿರುವ ಗೌರವ ಹಾಗೂ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಧ್ಯಕ್ಷ ಪ್ರಾಧಿಕಾರ ,ಶ್ರೀ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀಮತಿ ಮಲ್ಲಿಕಾ ಆಚಾರ್ಯ, ಅಧ್ಯಕ್ಷರು, ಇನ್ನಂಜೆ ಗ್ರಾಮ ಪಂಚಾಯತ್ , ಉದ್ಯಮಿ ಅಶೋಕ್ ಶೆಟ್ಟಿ ,ಶ್ರೀ ಪ್ರಕಾಶ್ ಶೆಟ್ಟಿ, “ಸಂಜೀವಿನಿ, ಸುಬ್ಬಣ್ಣ ಶೆಟ್ಟಿ ಮನೆ, ಆರ್ಯಾಡಿ ,ಗೋವಿಂದ ಶೆಟ್ಟಿ, ಯೋಗಿಶ ಶೆಟ್ಟಿ, ದಿನೇಶ್ ಶೆಟ್ಟಿ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸನ್ಮಾನ- ಹರೀಶ್ ಪೂಜಾರಿ, ದಿನಕರ ಬಾಬು,ಸುಧಾಕರ ಪೂಜಾರಿ, ಪೆನ್ವೇಲ್ ಸೋನ್ಸ್ ಇವರಿಗೆ ವೇದಿಕೆಯಲ್ಲಿ ಗೌರವದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಆಸರೆ ವೃದ್ಧಾಶ್ರಮಕ್ಕೆ ಇಪ್ಪತೈದು ಸಾವಿರ ರೂಪಾಯಿಯ ಧನ ಸಹಾಯ ಮಾಡಲಾಯಿತು.

Leave a Reply