ಪಡುಬಿದ್ರಿಯಲ್ಲಿ ಬಿಜೆಪಿ ಬೆಂಬಲಿತ ೨೦ ಮೊಗವೀರ ಯುವಕರ ಕಾಂಗ್ರೆಸ್ ಗೆ ಮಹಾಸೇರ್ಪಡೆ
ಪಡುಬಿದ್ರಿ: ಪಡುಬಿದ್ರಿ ಯ ಬಿಜೆಪಿ ಬೆಂಬಲಿತ 20 ಮೊಗವೀರ ,ಯುವಕರು ಮೊಗವೀರ ಮುಖಂಡ ಅಶೋಕ್ ಪಡುಬಿದ್ರಿ ನೇತ್ರತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಂಡರು.
ಮಲ್ಪೆ ಬೀಚ್ ನಲ್ಲಿ ಮನೆ ಮನೆ ಮತಪ್ರಚಾರ ಸಂದರ್ಭ ಮೊಗವೀರ ಯುವಕರ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಸೇರ್ಪಡೆಗೊಂಡ ಯುವಕರನ್ನು ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ,ವೈ ಸುಕುಮಾರ್ ,ಮೊದಲಾದವರು ಉಪಸ್ಥಿತಿತರಿದ್ದರು.

