Featured

55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.

55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.

ಕಾಪು :ಕೃಷಿಕ ದೇಶದ ಬೆನ್ನೆಲುಬು ಅಂತಾ ಕರಿತಾರೆ ಆದ್ರೇ ಕೃಷಿ ಕಡೆ ತಲೆ ಹಾಕಿ ಮಲಗುವುದೇ ಕಡಿಮೆ ಆಗಿದೆ .ಅಂತಹ ಈ ಸಮಯದಲ್ಲೂ ಕೃಷಿಯನ್ನೆ ಅವಲಂಭಿಸಿಕೊಂಡು ಅದರ ಜತೆಗೆ ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲೂ ಕೂಡ ಸೈ ಅನಿಸಿಕೊಂಡಿರುವ ವ್ಯಕ್ತಿಯ ಈ ಸ್ಟೋರಿ.
ಹೌದು ಕಾಪು ಪುರಸಭಾ ವ್ಯಾಪ್ತಿಯ ಕಾಪು ದ್ವೀಪ ಸ್ಥಂಬದ ಬಳಿಯಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಶೇಖರ್ ಸಾಲ್ಯಾನ್, ಸುಮಾರು 72 ವರ್ಷ ಪ್ರಾಯದ ಕೃಷಿನ ಕಾರ್ಯದಲ್ಲಿ ಯುವಕರಿಗೆ ಸೆಡ್ಡು ಹೊಡೆಯಬಲ್ಲ ವ್ಯಕ್ತಿ,ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಈ ವ್ಯಕ್ತಿ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಅದರ ಜತೆಗೆ ಸುಮಾರು 50 ವರ್ಷದಿಂದ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಭೂಮಿಯಲ್ಲಿ 365 ದಿನಾಲೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕರಾವಳಿ ಭಾಗದ ಏಕೈಕ ವ್ಯಕ್ತಿ ಕಾಪು ಶೇಖರ ಸಾಲ್ಯಾನ್.

ಬೆಳಗ್ಗಿನ ಜಾವ 5.30 ರಿಂದ ಮಧ್ಯಾಹ್ನದವರೆಗೆ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ತದನಂತರದ ಸಮಯ ತನ್ನ ಹೋಟೆಲ್ ಉದ್ಯಮ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೈ ಅನಿಸಿಕೊಂಡಿದ್ದಾರೆ.
ಪ್ರತಿ ವರ್ಷ ಭತ್ತದ ಪೈರು, ಜತೆಜತೆಗೆ ಕಲ್ಲಂಗಡಿ, 20ಕ್ಕೂ ಅಧಿಕ ಬಗೆಯ ಸಾವಯವ ತರಕಾರಿ ಸೌತೆಹಣ್ಣು,ಕುಂಬಳಕಾಯಿ, ಮೂಲಂಗಿ, ಕ್ಯಾರೆಟ್,ಬೀನ್ಸ್,ಅಲಸಂಡೆ, ಬಸಲೆ, ಟೋಮೆಟೊ, ಮೆಣಸು, ಮಾವು,ಸೇರಿದಂತೆ ಇನ್ನೂ ಹಲವು ಬಗೆಯ ಕೃಷಿಯನ್ನ ಬೆಳೆಸುತ್ತಾರೆ.
ಈ ಭಾರಿ ಸುಮಾರು 1 ಎಕರೆ ಜಾಗದಲ್ಲಿ ಕಲ್ಲಂಗಡಿ ಕೃಷಿ ಮಾಡಿದ್ದು ಒಂದೊಂದು ಕಲ್ಲಂಗಡಿ ಸುಮಾರು 10 ಕೇಜಿಗೂ ಅಧಿಕ ತೂಕದ ಇಳುವರಿ ಕಂಡಿದೆ.
ಆದರೇ ಈ ಎಲ್ಲಾ ಕೃಷಿ ಮಾಡಿದರೂ ಸಹ ಮಾರ್ಕೇಟ್ ಮಾತ್ರ ನರಸತ್ತಂತಾಗಿದೆ ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕೆಲವೊಂದು ಸಲ ಮೂರು-ಮುಕ್ಕಾಲು ದರಕ್ಕೂ ನೀಡಿದ್ದು ಇದೆ ಅನ್ನತ್ತಾರೆ.

ಕೃಷಿ ಅಧ್ಯಯಾನದ ವಿಚಾರವಾಗಿ ವಿದೇಶವಾದ ಚೈನಾ ಹಾಗೂ ದೇಶದ ಮೂಲೆ ಮೂಲೆಗೂ ಸಂಚರಿಸಿ ಅಲ್ಲಿನ ಆಧುನಿಕ ಪ್ರಯೋಗವನ್ನ ಕರಾವಳಿ ಭಾಗಕ್ಕೆ ಹೊಂದಣಿಸಿ ಬೆಳೆ ಬೆಳೆಸಿದ್ದು ಇದೆ ಇವರು.

ಸುಮಾರು 55 ವರ್ಷದಿಂದ ಕೃಷಿ ಕಾರ್ಯ ಮಾಡುತ್ತಿದ್ದೇನೆ ,ಮಾದಲಿಗೆ ನಾನು ಕೃಷಿಕ ತದನಂತರ ಸಾಮಾಜಿಕ ಧಾರ್ಮಿಕ ಜತೆಗೆ ಉದ್ಯಮ,ಕೆಲವೊಂದು ಸಲ ಲಾಭ ನಷ್ಟ ಆಗಿದ್ದು ಇದೆ, ಹಾಗಂತ ಕಾಯಕ ನಿಲ್ಲಿಸಲಿಲ್ಲ ಮನೆಯ 365 ದಿನಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಸಿ ಉಳಿದದನ್ನು ಸ್ಥಳಿಯ ಸಂತೆಗೆ ನೀಡುತ್ತೇವೆ ಮಾತ್ರವಲ್ಲದೆ ಲೈಟ್‍ಹೌಸ್ ನೋಡಲು ಬರುವ ಪ್ರವಾಸಿಗರೂ ಕೂಡ ಬಂದ ಸಾವಯಾವ ಎಂಬ ಕಾರಣದಿಂದ ಕೊಂಡುಕೊಳ್ಳುತ್ತಾರೆ, ಆದ್ರೇ ಮಾರ್ಕೇಟ್ ನಂಬಿಕೊಂಡು ಈಗಿನ ಕಾಲದಲ್ಲಿ ಕೃಷಿ ಮಾಡುವುದು ಭಾರಿ ಕಷ್ಟ.

 (ಕಾಪು ಶೇಖರ ಸಾಲಿಯಾನ್.)

ವರದಿ: ಪುರುಷೋತ್ತಮ ಸಾಲ್ಯಾನ್ ಮೂಳೂರು
9343846360

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

3 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

8 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

8 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

8 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

9 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

9 hours ago