72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ -Vishwanews24

Featured, ರಾಷ್ಟ್ರ ನ್ಯೂಸ್

72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ -Vishwanews24

ನವದೆಹಲಿ: ದೇಶವು ಇಂದು 72ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ಅವರು ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

ದೆಹಲಿಯ ರಾಜಪಥ್‌ನಲ್ಲಿ ವಿಜಯ್‌ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ಆರಂಭಗೊಂಡಿದೆ. ಎರಡು ಸಾಲುಗಳಲ್ಲಿ ವಾಯುಪಡೆ & ನೌಕಾಪಡೆ ತುಕಡಿ ಶಕ್ತಿ ಅನಾವರಣಗೊಳ್ಳುತ್ತಿದೆ. ಇನ್ನು ಪರೇಡ್​ನಲ್ಲಿ 122 ಮಂದಿ ಸೈನಿಕರ ಬಾಂಗ್ಲಾದೇಶ ಸೇನಾ ತುಕಡಿ ಭಾಗಿಯಾಗಿದೆ.

600 ಬದಲು ಈ ಬಾರಿ 160 ವಿದ್ಯಾರ್ಥಿಗಳಷ್ಟೇ ಭಾಗಿಯಾಗಲು ಅವಕಾಶ ನೀಡಲಾಗಿದೆ. ಪ್ರತಿವರ್ಷ 1 ಲಕ್ಷ 15 ಸಾವಿರ ಮಂದಿ ಪರೇಡ್ ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಸೋಂಕು ಹಿನ್ನೆಲೆ ದೈಹಿಕ ಅಂತರ ಪಾಲನೆಯಾಗಬೇಕು ಹೀಗಾಗಿ 25,000 ಮಂದಿಗಷ್ಟೇ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕರಾವಳಿಯ ವೈದ್ಯ ಭೂಷಣ ಡಾ.ಬಿ.ಎಂ.ಹೆಗ್ಡೆಯವರಿಗೆ ಕೇಂದ್ರ ಸರಕಾರದ ಅತ್ಯುನ್ನತ ಗೌರವ ಪ್ರಶಸ್ತಿ ‘ಪದ್ಮವಿಭೂಷಣ’ ಘೋಷಣೆ -Vishwanews24