ಉಡುಪಿ: ಶಿರೂರು ನಾಡದೋಣಿ ದುರಂತ – ಸ್ಥಳಕ್ಕೆ ಸಚಿವ ಅಂಗಾರ ಭೇಟಿ ನೀಡಿ ಪರಿಶೀಲನೆ ; ಶೀಘ್ರ ಪರಿಹಾರ ನೀಡುವುದಾಗಿ ಭರವಸೆ  – Vishwanews24

Featured, ಉಡುಪಿ

ಉಡುಪಿ: ಶಿರೂರು ನಾಡದೋಣಿ ದುರಂತ ಸ್ಥಳಕ್ಕೆ ಸಚಿವ ಅಂಗಾರ ಭೇಟಿ ನೀಡಿ ಪರಿಶೀಲನೆ ;

ಶೀಘ್ರ ಪರಿಹಾರ ನೀಡುವುದಾಗಿ ಭರವಸೆ 

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ನಾಡ ದೋಣಿ ದುರಂತಕ್ಕೊಳಗಾದ ಸ್ಥಳಕ್ಕೆ ಉಡುಪಿಯ ಉಸ್ತುವಾರಿ ಸಚಿವ ಅಂಗಾರ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೈಂದೂರಿನ ಕಳಿಹಿತ್ಲುನಲ್ಲಿ‌ ಏಕಾಏಕಿ ಸುರಿದ ಮಳೆಯ ಪರಿಣಾಮದಿಂದಾಗಿ ಅಪಾರ ಹಾನಿಯಾಗಿತ್ತು. ನಲವತ್ತಕ್ಕೂ ಅಧಿಕ ದೋಣಿಗಳಿಗೆ ಹಾನಿಯಾಗಿತ್ತು.

ಅಷ್ಟೇ ಅಲ್ಲದೆ ಕಡಲ ಅಬ್ಬರಕ್ಕೆ ಕೊಚ್ಚಿಹೋಗಿ ನಾಡದೋಣಿಗಳು ಸಂಪೂರ್ಣವಾಗಿ ಹಾನಿಯಾಗಿತ್ತು. ಈ ಸ್ಥಳಕ್ಕೆ ಸಚಿವ ಅಂಗಾರ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದರು.

ನಾಡದೋಣಿ ಮೀನುಗಾರಿಕಾ ಬೋಟ್ ಗಳಿಗೆ 3 ಕೋಟಿ ಅಧಿಕ‌ ನಷ್ಟ ಪರಿಹಾರದ ಕುರಿತು ಸಮಾಲೋಚನೆ ನಡೆಸಿ ಶೀಘ್ರವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಉಡುಪಿ: ದೇವಸ್ಥಾನದಲ್ಲಿ ಹುಡುಗಿ ಜೊತೆ ಬಂದು ಗರ್ಭಗುಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಯುವಕ ..

Leave a Reply