ಕನ್ಯಾ ರಾಶಿಯವರೇ ಮುಂಗೋಪದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ;ನೋಡಿ ಇಂದಿನ ರಾಶಿ ಭವಿಷ್ಯ : ಗಣಪತಿ ಭಟ್ 8088827292 – Vishwanews24
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಮೇಷ:- ಎಲ್ಲಾ ಕೆಲಸ ಕಾರ್ಯಗಳು ಹಿರಿಯರೊಬ್ಬರ ಸಹಕಾರದಿಂದ ಪೂರ್ಣಗೊಳ್ಳುವುವು. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಆದರೆ ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ತೊಂದರೆ ಇಲ್ಲ.
ವೃಷಭ:- ಯಾವುದೇ ವಸ್ತು ಅಥವಾ ವ್ಯಕ್ತಿಯಾಗಲಿ ಎದುರಿಗೆ ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಕಣ್ಮರೆಯಾದಾಗಲೇ ಅದರ ಮಹತ್ವ ಗೊತ್ತಾಗುವುದು. ಹಾಗಾಗಿ ಇದ್ದ ಸಮಯದಲ್ಲಿಯೇ ವ್ಯಕ್ತಿಯ ಗುಣಗಾನ ಮಾಡುವುದು ಒಳ್ಳೆಯದು. ಇದರಿಂದ ಪರಸ್ಪರ ವಿಶ್ವಾಸ ಹೆಚ್ಚಾಗುವುದು.
ಮಿಥುನ:- ಬಂಧು ಬಾಂಧವರ ಹಾಗೂ ಸ್ನೇಹಿತರ ಸಹಾಯ ಮತ್ತು ಸಹಕಾರ ನಿಮಗೆ ದೊರೆಯುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಜನ್ಮಸ್ಥ ರಾಹುಗ್ರಹ ಶಿರೋವೇದನೆಯನ್ನು ಉಂಟು ಮಾಡುವ ಸಂದರ್ಭವಿದೆ. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.
ಕಟಕ:- ವೈರ ಸಾಧಿಸುವ ಮನಸ್ಸು ನಿಮ್ಮ ವಿರೋಧಿಗೂ ಇರಲಾರದು. ಆದರೆ ಸದ್ಯದ ಗ್ರಹಸ್ಥಿತಿಯು ಅಷ್ಟೊಂದು ಉತ್ತಮವಾಗಿಲ್ಲದ ಕಾರಣ ತಗ್ಗಿಬಗ್ಗಿ ನಡೆಯುವುದು ಒಳ್ಳೆಯದು. ಬಾಗಿದವನು ಮುಂದೆ ಬೀಗಬಹುದು. ಸಾಂಸಾರಿಕ ತಾಪತ್ರಯ ನಿವಾರಣೆಗಾಗಿ ಶಿವನನ್ನು ಧ್ಯಾನಿಸಿ.
ಸಿಂಹ:- ಮಾತಿನ ಚಾಲಾಕಿತನ ಎಲ್ಲಾ ಕಡೆ ನಡೆಯವುದಿಲ್ಲಎಂಬ ಸತ್ಯ ನಿಮಗೆ ಮನವರಿಕೆ ಆಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ವಜ್ರಕ್ಕೆ ಜಾಹೀರಾತಿನ ಹಂಗೇಕೆ? ನಿಮ್ಮನ್ನು ವಿರೋಧಿಸುವವರು ನಿಮ್ಮನ್ನು ಹಾಡಿ ಕೊಂಡಾಡುವರು.
ಕನ್ಯಾ:- ಮುಂಗೋಪದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಸಾಕಷ್ಟು ಜಾಗ್ರತೆ ವಹಿಸಿ. ಪಂಚಮಶನಿಯು ಮಕ್ಕಳ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವರು. ಪರಿಹಾರಕ್ಕಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ತುಲಾ:- ಟೀಕೆ ಟಿಪ್ಪಣಿಗಳಿಗೆ ಹೆದರದಿರಿ. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವುದು ಒಳ್ಳೆಯದು ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.
ವೃಶ್ಚಿಕ:- ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನು ಎದುರಿಸಬೇಕಾಗುವುದು. ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿ. ಗುರುವು ದ್ವಿತೀಯ ಧನಸ್ಥಾನದಲ್ಲಿರುವುದರಿಂದ ಒಳಿತಾಗುವುದು. ಪರಾಕ್ರಮ ಕೆಲಸಗಳಲ್ಲಿ ಯಶಸ್ಸು ದೊರೆಯುವುದು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಧನುಸ್ಸು:- ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿಅನಗತ್ಯ ಸಂಶಯ ತಾಳುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಸಹೋದ್ಯೋಗಿಗಳ ಜತೆ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ.
ಮಕರ:- ಮನೆಯವರಿಗಿಂತ ಮನೆ ಹೊರಗಿನ ಜನರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಸ್ನೇಹಿತ ಭೇಟಿ ಆಗುವುದರಿಂದ ಮನಸ್ಸಿನ ದುಗುಡವನ್ನು ಅವನ ಬಳಿ ಹಂಚಿಕೊಳ್ಳಿ.
ಕುಂಭ:- ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮೀನ:- ನಿಮ್ಮ ಮಾತಿನ ಜಾಣ್ಮೆ ಮತ್ತು ನಮ್ಮ ಸರಳವಾದ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸ್ಪಲ್ಪಡುವಿರಿ. ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಬರುವುದು. ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಈಗ ಸುಮ್ಮನಿರುವುದು ಒಳ್ಳೆಯದು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
