

ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ” ಬಿಜೆಪಿ ಆಡಳಿತ ಸಮಯದಲ್ಲಿ ಏನು ಮಾಡಿದ್ದಾರೆಂದು ದಾಖಲೆ ಸಮೇತ ಮತದಾರರಿಗೆ ತೋರಿಸಲಿ ವಿನಹ ಬರೀ ಆರೋಪ ಮತ್ತು ಸುಳ್ಳು ಹೇಳಿ ಓಟು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುವುದು ಬೇಡ-ಕಾಪುವಿನ ಪ್ರಸ್ತುತ ಶಾಸಕರಿಗೆ ಅವರೂರಿನ ಸಮಸ್ಯೆ ಸರಿ ಮಾಡಲು ಆಗಲಿಲ್ಲ ಇನ್ನು ಪುರಸಭೆಯ ೨೩ ವಾರ್ಡಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಹೇಗೆ..? ಶಾಸಕರಾಗಿ ೪ ವರ್ಷ ಆಗುತ್ತ ಬಂತು ಆದರೆ ಇದುವರೆಗೆ ಕಾಪು ಪುರಸಭೆಗೆ ಸ್ವಹಿತಾಸಕ್ತಿಯಿಂದ ತಂದಿರುವ ಶಾಶ್ವತ ಯೋಜನೆ ಜನರ ಮುಂದೆ ಇಡಲಿ, ಕಾಪು ಕ್ಷೇತ್ರ ಮತ್ತು ಪುರಸಭೆಗೆ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ತಂದಿರುವ ಅನುದಾನದ ಎದುರಿಗೆ ಬಿಜೆಪಿಯ ಸಾಧನೆ ಶೂನ್ಯ ಎಂದು ಕಿಡಿಕಾರಿದರು.