ವೀರ ಯೋಧರ ಎನ್ ಕೌಂಟರ್ ಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರು ಬಲಿ – Vishwanews24
40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಬಲಿಯಾದ ಪುಲ್ವಾಮಾ ದಾಳಿಯಲ್ಲಿ ಮುದಾಸಿರ್ ಪ್ರಮುಖ ಪಾತ್ರ ವಹಿಸಿದ್ದ. ಯೋಧರಿದ್ದ ಸಿಆರ್ಪಿಎಫ್ ಬಸ್ಗೆ ಸ್ಫೋಟಕಗಳಿದ್ದ ಮಾರುತಿ ಎಕೋ ಅಪ್ಪಳಿಸಿ ವಿದ್ವಂಸಕ ಕೃತ್ಯವೆಸಗುವುದಕ್ಕೂ ಮುನ್ನ ಮುದಾಸಿರ್ ವಾಹನಕ್ಕೆ ಆರ್ಡಿಎಕ್ಸ್ ಗಳನ್ನು ತುಂಬಲು ನೆರವಾಗಿ ದಾಳಿಗೆ ಸಂಚು ರೂಪಿಸಿದ್ದ ಪ್ರಮುಖರಲ್ಲಿ ಒಬ್ಬನಾಗಿದ್ದ.
ಈಗ ಮುದಾಸಿರ್ ಸೇರಿದಂತೆ ಜೆಇಎಂ ಉಗ್ರಗಾಮಿ ಸಂಘಟನೆಯ ಇನ್ನೂ ಮೂರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇಂದೇ ನಡೆದ ಎನ್ಕೌಂಟರ್ಗಳು ಮತ್ತು ಫೆ. 24ರಂದು ಬಾಲಾಕೋಟ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರರು ಸಹ ಹತರಾಗಿದ್ದರು.
ಮೂವರ ಉಗ್ರರ ಶವಗಳ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭರ್ಜರಿ ಭೇಟಿಯಾಡಿದ್ದಾರೆ. ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಿಂಗ್ಲಿಷ್ ಗ್ರಾಮದ ಬಳಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
