ಪ್ರವೀಣ್ ಹತ್ಯೆಯ ವಿಚಾರ- ಬಿಜೆಪಿ ಯುವಮೋರ್ಚದಲ್ಲಿ ಮುಂದುವರೆದ ರಾಜೀನಾಮೆ:vishwanews24
ಪ್ರವೀಣ್ ಹತ್ಯೆಯ ವಿಚಾರ- ಬಿಜೆಪಿ ಯುವಮೋರ್ಚದಲ್ಲಿ ಮುಂದುವರೆದ ರಾಜೀನಾಮೆ
ಬೆಂಗಳೂರು: ಮಂಗಳೂರಿನ ಬೆಳ್ಳಾರೆಯ ನಿವಾಸಿ ಪ್ರವೀಣ್ ನೆಟ್ಟಾರ್ ಅವರನ್ನು ಮತಾಂಧರು ತಲವಾರು ಬೀಸಿ ಹತ್ಯೆ ಮಾಡಿದ್ದಾರೆ ಈ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂದುಪರ ಸಂಘಟನೆಗಳ ಕಾರ್ಯಕರ್ತರನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಹಾಗೂ ನೈಜ ಕಾರ್ಯಕರ್ತರ ಜತೆಗೆ ನಿಲ್ಲುವ ನಾಯಕರಿಗೆ ಬಿಜೆಪಿಯಲ್ಲಿ ಬರ ಇದೆ ಎಂಬ ಕಾರಣಕ್ಕಾಗಿ ರಾಜ್ಯದ ಮೂಲೆಮೂಲೆಯಿಂದ ಸಕ್ರೀಯ ಬಿಜೆಪಿ ಯುವಮೋರ್ಚ ಕಾರ್ಯಕರ್ತರು ಸಾಲುಸಾಲಾಗಿ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ರಾಜೀನಾಮೆ ನೀಡುವ ಪ್ರಕ್ರೀಯೆ ಜೋರಾಗಿಯೇ ನಡೆಯುತ್ತಿದೆ.
ಈ ನಡುವೆ ಚಾಮುಂಡೇಶ್ವರಿಯಲ್ಲಿ ಕೂಡ ಯುವಮೋರ್ಚ ನಾಯಕರು ರಾಜೀನಾಮೆ ನೀಡುವ ಮುಖಾಮತರ ದೇಶಕ್ಕಾಗಿ ಮತ್ತು ಧರ್ಮಕ್ಕಾಗಿ ಬದುಕುವ ಕಾರ್ಯಕರ್ತರೇ ಹೊರತು ಬಕೆಟ್ ರಾಜಕಾರಣ ನಮ್ಮದಲ್ಲ ಎಂದು ತೋರಿಸುತ್ತಿದ್ದಾರೆ.
ಇನ್ನೂ ಕರಾವಳಿ ಭಾಗದಲ್ಲಿ ಗಮನಿಸಿದರೆ ಮಲ್ಪೆ-ಉಡುಪಿ-ಬೈಂದೂರು ಸೇರಿದಂತೆ ವಿವಿಧ ಕಡೆ ರಾಜೀನಾಮೆ ನೀಡಿದ್ದು ಮುಂದಿನ ನಡೆ ಯಾವ ರೀತಿ ಇರುತ್ತೆ ಎಂಬುದನ್ನು ಕಾದು ನೋಡಬೇಕಿದೆ.
