ಬಂಟಕಲ್ಲು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ-vishwanews24
ಬಂಟಕಲ್ಲು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಕಾಪು: ಜನಸೇವಾ ಕೆಂದ್ರ ಬಂಟಕಲ್ಲು ,ವಿಶ್ವಕರ್ಮ ರಿಜಿಸ್ಟರ್ ಬಂಟಕಲ್ಲು ,ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಪು ವಲಯ ,ರೋಟರಿ ಕ್ಲಬ್ ಶಿರ್ವ.ಶ್ರೀ ದುರ್ಗಾ ಮಹಿಳಾ ಮಂಡಲ ಬಂಟಕಲ್ಲು,ಒಳ ದೂರು ವೆಲ್ಫರೆ ಸ್ಟೇಷನ್ ಹಾಗೂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಂಟಕಲ್ಲು.ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಂಟಕಲ್ಲಿನಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ನಿಲಯದಿಂದ ಶ್ರೀ ಪಂಜಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಶಿರ್ವ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಡಾಕ್ಟರ್ ಅರುಣ್ ಹೆಗ್ಡೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರವೀಂದ್ರ ಪಾರ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜನಸೇವಾ ಕೇಂದ್ರ ಪ್ರಮುಖರಾದ ಶಂಕರ್ ನಾಯಕ್ ಸಂದೀಪ್ ಬಂಗೇರ, ಚಂದ್ರಶೇಖರ ಆಚಾರ್ಯ, ರಮೇಶ್ ಆಚಾರ್ಯ, ಶ್ರೀಮತಿ ಪ್ರೀತಿಲತಾ ಆಚಾರ್ಯ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಶ್ರೀ ಮುರಳಿದರ ಆಚಾರ್ಯ ,ರೋಟರಿ ಕ್ಲಬ್ ಶಿರ್ವ ಅಧ್ಯಕ್ಷರಾದ ವಿಷ್ಣುಮೂರ್ತಿ ಸರಳಯ, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಶಂಕರ ನಾಯಕ್ ,ರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಸುಧಾಕರ್ ಕುಲಾಲ್ ಹಾಗೂ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ವೀರೇಂದ್ರ ಶಿರ್ವ ಉಪಸ್ಥಿತರಿದ್ದರು.



