ಬಜೆಟ್: ಎಲ್ಲಾ ಜಿಲ್ಲೆಗಳಿಗೆ ಜನೌಷಧಿ ಕೇಂದ್ರ ವಿಸ್ತರಣೆ , ದೇಶಾದ್ಯಂತ 112 ಆಸ್ಪತ್ರೆಗಳ ನಿರ್ಮಾಣ, ಆರೋಗ್ಯ ವಲಯಕ್ಕೆ ₹69 ಸಾವಿರ ಕೋಟಿ ಅನುದಾನ, ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜ್ : ನಿರ್ಮಲಾ ಸೀತಾರಾಮನ್ -Vishwanews24
ನವದೆಹಲಿ:ದೇಶದ ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 2ರ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿದ್ದಾರೆ.
ಇನ್ನು ಇದೇ ವೇಳೆ ತಮ್ಮ ಬಜೆಟ್ ಮಂಡನೆ ವೇಳೆಯಲ್ಲಿ ಅವರು ರೈತರಿಗಾಗಿ ಧಾನ್ಯಲಕ್ಷ್ಮಿ ಯೋಜನೆ ಜಾರಿ ಮಾಡಲಾಗುತ್ತಿದ್ದು, ಇನ್ನು ಮುದ್ರಾ, ನಬಾರ್ಡ್ ಯೋಜನೆಯಡಿ ಸಾಲ ಸೌಲಭ್ಯ ಸಿಗಲಿದೆ ಅಂಥ ಹೇಳಿದರು. ಆರೋಗ್ಯ ವಲಯಕ್ಕೆ ₹69 ಸಾವಿರ ಕೋಟಿ ಅನುದಾನ ನೀಡಲಾಗುವುದು ಹಾಗು ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ ಅಂತ ಹೇಳಿದರು. ಇದಲ್ಲದೇ ದೇಶಾದ್ಯಂತೆ ಹೊಸದಾಗಿ 112 ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು ಅಂತ ಹೇಳಿದರು. 2025ರೊಳಗೆ ಎಲ್ಲಾ ಆಸ್ಪತ್ರೆಗಳಲ್ಲೂ ಜನೌಷಧಿ ಯೋಜನೆ ಜಾರಿಗೆ ಬರಲಿದೆ ಅಂತ ಹೇಳಿದರು.
