ಮಂಗಳೂರು: ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದವನಿಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಬಜರಂಗದಳ: vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಗರದ ಮಾರ್ನಮಿಕಟ್ಟೆಯಲ್ಲಿರುವ ಶ್ರೀ ಕೊರಗಜ್ಜನ ಕಟ್ಟೆ ಸೇರಿದಂತೆ 18 ದೇವಸ್ಥಾನ, ದೈವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದು ಜೈಲು ಪಾಲಾದ ಆರೋಪಿ ದೇವದಾಸ್ ದೇಸಾಯಿಗೆ ಬಜರಂಗದಳವು ಬ್ಯಾನರ್ ಹಾಕಿ ಶ್ರದ್ಧಾಂಜಲಿ ಅರ್ಪಿಸಿದೆ.

ಮಂಗಳೂರಿನ ಹೊರವಲಯದಲ್ಲಿರುವ ಬೀರಿ ಜಂಕ್ಷನ್ ನಲ್ಲಿ ಬ್ಯಾನರ್ ಹಾಕಿರುವ ಮಾಡೂರು ಬಜರಂಗದಳ ಶಾಖೆಯು, ಆರೋಪಿ ದೇವದಾಸ್ ದೇಸಾಯಿ ಎಂಬ ಹೆಸರನ್ನು ಡೇವಿಡ್ ದೇಸಾಯಿ ಎಂದು ನಾಮಾಂತರ ಮಾಡಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದೆ.

ಇದನ್ನೂ ಓದಿ  

ನೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ-ಆರು ಮಂದಿ ವಿದ್ಯಾರ್ಥಿನಿಯ ಹೊಸ ತಗಾದೆಗೆ ಕ್ಯಾರೇ ಅನ್ನದ ಕಾಲೇಜು ಆಡಳಿತ ಮಂಡಳಿ-ಹಿಜಾಬ್ ಧರಿಸಿ ಕ್ಲಾಸಲ್ಲಿ ಕೂರುವ ನಿಯಮವಿಲ್ಲ-ಪ್ರಾಂಶುಪಾಲರಿದ ಖಡಕ್ ಉತ್ತರ vishwanews24

ಕ್ರಿಶ್ಚಿಯನ್ ಧರ್ಮಾನುಯಾಯಿಯಾಗಿದ್ದ ದೇವದಾಸ್ ದೇಸಾಯಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜೈಲು ಪಾಲಾಗಿದ್ದಾನೆ. ಆದರೆ, ಆತ ಜೀವಂತ ಇರುವಾಗಲೇ ಶ್ರದ್ಧಾಂಜಲಿ ಬ್ಯಾನರ್ ಹಾಕಿ ‘ಮತ್ತೆಂದೂ ಹುಟ್ಟಿ ಬರಬೇಡ ಈ ಪವಿತ್ರ ಭಾರತದ ಮಣ್ಣಿನಲ್ಲಿ. ಮತಾಂತರಿ ಮಿಷನರಿಗಳೇ ನಿಮ್ಮ ಮತ ಪ್ರಚಾರಕ್ಕಾಗಿ ಸನಾತನ ಧರ್ಮದ ದೈವ- ದೇವರುಗಳನ್ನು ನಿಂದಿಸಬೇಡಿ‌. ನಿಮ್ಮಂತಹ ಅಧರ್ಮೀಯರ ನಾಶ ಈ ಮಣ್ಣಿನಲ್ಲಿ ಖಡಾ ಖಂಡಿತ. ಕ್ರಿಸ್ತನ ಬೇಳೆ ಬೇಯದು, ಈ ಕೃಷ್ಣನ ನಾಡಿನಲ್ಲಿ” ಎಂದು ಬರೆಯಲಾಗಿದೆ

ಜಾಹಿರಾತು
                                                                                           ಜಾಹಿರಾತು

Leave a Reply