ಕಾಪುವಿನ ಪ್ರಖ್ಯಾತ ಗುತ್ತಿಗೆದಾರನ ಮನೆ, ಕಛೇರಿ ಐಟಿ ದಾಳಿ, ದಾಖಲೆ ಪರಿಶೀಲನೆ

desha, ಉಡುಪಿ

ಕಾಪು: ನಗರದ ಪ್ರಖ್ಯಾತ ಗುತ್ತಿಗೆದಾರನ ಮನೆಗೆ , ಕಛೇರಿಗೆ ,ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.ದೇವಿಪ್ರಸಾದ್ ಕನ್ ಸ್ಟ್ರಕ್ಷನ್ ನ ಗುತ್ತಿಗೆದಾರರ ಮನೆ ಮತ್ತು ಕಛೇರಿಗೆ ಎರಡು ಕಾರಿನಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಬೆಳಿಗ್ಗೆ 8.30ರ ಸುಮಾರಿಗೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಗುತ್ತಿಗೆದಾರ ವಿಶ್ವನ್ಯೂಸ್24 ಜೊತೆ ಮಾತನಾಡಿ” ನಾನು ಖಾಸಾಗಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮುಂಬಯಿಗೆ ಇಂದು ಬೆಳಿಗ್ಗೆ ತೆರಳಿದ್ದೆನೆ, ಐಟಿ ಅಧಿಕಾರಿಗಳ ಧಾಳಿ ನಡೆಸಿದ ಬಗ್ಗೆ ತದನಂತರ ತಿಳಿಯಿತು, ನಾನೇನೂ ಲೋಪ ಮಾಡಿಲ್ಲ ಪ್ರತಿವರ್ಷ ತೆರಿಗೆಯನ್ನ ಪಾವತಿ ಮಾಡುತ್ತಿದ್ದೆನೆ , ಚುನಾವಣೆ ಸಮಯದಲ್ಲಿ ಐಟಿ ದಾಳಿಯಾಗಿರುವ ಹಿಂದೆ ರಾಜಕೀಯ ಇರಲು ಸಾಧ್ಯವಿಲ್ಲ ಮತ್ತು ಅಧಿಕಾರಿಗಳ ಕರ್ತವ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ ಅವರಿಗೆ ನಮ್ಮ ಕಛೇರಿ ಸಿಬ್ಬಂದಿಗಳು ಸಹಕರಿಸುತ್ತಾರೆ ಎಂದರು.

ಗುತ್ತಿಗೆದಾರ , ದೇವಿಪ್ರಸಾದ್ ಕನ್ ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್, ಕಾಪು. ಬೆಂಗಳೂರು