ಬೆಳ್ತಂಗಡಿ: ಸೆ. 7ರಿಂದ ದಿಡುಪೆ ಜಲಪಾತ ವೀಕ್ಷಣೆಗೆ ಮುಕ್ತ ; ಗಡಾಯಿಕಲ್ಲು ಚಾರಣಕ್ಕೆ ನಿಷೇಧ ಮುಂದುವರಿಕೆ – vishwanews24
ಬೆಳ್ತಂಗಡಿ: ಸೆ. 7ರಿಂದ ದಿಡುಪೆ ಜಲಪಾತ ವೀಕ್ಷಣೆಗೆ ಮುಕ್ತ: ಗಡಾಯಿಕಲ್ಲು ಚಾರಣಕ್ಕೆ ನಿಷೇಧ ಮುಂದುವರಿಕೆ
ಬೆಳ್ತಂಗಡಿ: ಭಾರೀ ಮಳೆ ಹಿನ್ನೆಲೆಯಲ್ಲಿ ದಿಡುಪೆ ಜಲಪಾತ (ಕಡಮಗುಂಡಿ) ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಇದೀಗ ಮಳೆ ಕಡಿಮೆಯಾಗಿರುವುದರಿಂದ ಸೆ. 7ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ ಎಂದು ವನ್ಯಜೀವಿ ಜೀವಿ ವಿಭಾಗದ ಅಧಿಕಾರಿ ಶರ್ಮಿಷ್ಟಾ ಮಾಹಿತಿ ನೀಡಿದ್ದಾರೆ.
ಜು. 20ರಿಂದ ದಿಡುಪೆ ಫಾಲ್ಸ್ (ಕಡಮಗುಂಡಿ) ಜಲಪಾತಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದೀಗ ಮಳೆಯ ಪರಿಸ್ಥಿತಿ, ಜಲಪಾತದ ಸುರಕ್ಷೆಯನ್ನು ಪರಿಶೀಲಿಸಿ ಪ್ರವೇಶ ನಿರ್ಬಂಧವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.
ಉಡುಪಿ : 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ – vishwanews24
ನೀರಿನ ಹರಿವು, ಕಲ್ಲುಗಳ ಮೇಲಿನ ಜಾರುವಿಕೆ, ಹವಾಮಾನ ಪರಿಸ್ಥಿತಿ ಗಮನದ ಲ್ಲಿಟ್ಟು ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ: ಗಡಾಯಿಕಲ್ಲಿನ ಮೇಲ್ಬಾಗದಿಂದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗಡಾಯಿಕಲ್ಲು ಚಾರಣಕ್ಕೆ ವಿಧಿಸಲಾಗಿರುವ ನಿಷೇಧ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಡುಪಿ: ವಿಟ್ಲಪಿಂಡಿ ಉತ್ಸವ ವೇಳೆ ಶ್ರೀಗಳ ಕೈಯಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ – vishwanews24
