ಹೆಜಮಾಡಿ ಟೋಲ್ ಗೇಟ್ ಸುಂಕ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ -Vishwanews24

Featured, ಉಡುಪಿ

ಹೆಜಮಾಡಿ ಟೋಲ್ ಗೇಟ್ ಸುಂಕ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ -Vishwanews24

ಕಾಪು : ಹೆಜಮಾಡಿ ನಾಗರಿಕರ ಹಿತರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ಪಡುಬಿದ್ರಿ, ಹೆಜಮಾಡಿ,ಮುಲ್ಕಿ ಭಾಗದ ಸ್ಥಳೀಯರಿಗೆ ಟೋಲ್ ವಿನಾಯಿತಿ ಕೋರಿ ಹೆಜಮಾಡಿ ಟೋಲ್ ಗೇಟ್ ಬಳಿ ಬುಧವಾರ ಪ್ರತಿಭಟನೆ ನಡೆಯಿತು.

ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ , ಸುಮ್ಮನೇ ಆರೋಪ ಮಾಡುವುದು ಬೇಡ :ಪೇಜಾವರ ಶ್ರೀ -Vishwanews24

ಫಾಸ್ಟ್ ಟ್ಯಾಗ್‌ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ‌ ನೀಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆ,ಹೆಜಮಾಡಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ,ಮುಲ್ಕಿ ನಾಗರಿಕರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಎನ್ ಪುತ್ರನ್,ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಫಾರೂಕ್ ಚಂದ್ರನಗರ ಮನವಿ ಮೇರೆಗೆ ಬಡ ಕುಟುಂಬದ ಮದುಮಗಳಿಗೆ ಒಂದು ಪವನ್ ಚಿನ್ನ ಕೊಡುಗೆ ನೀಡಿದ ಮಲಬಾರ್ ಚಾರಿಟೇಬಲ್ ಟ್ರಸ್ಟ್ -Vishwanews24

ಈ ಸಂದರ್ಭದಲ್ಲಿ ಮುಲ್ಕಿ,ಹೆಜಮಾಡಿ, ಪಡುಬಿದ್ರಿ ಟೋಲ್ ಹೋರಾಟ ಸಮಿತಿಯಿಂದ ಟೋಲ್ ವಿನಾಯಿತಿ ಬಗ್ಗೆ ಎನ್.ಎಚ್ ಪ್ರತಿನಿಧಿ ಮಲ್ಲಿಕಾರ್ಜುನ ಇವರಿಗೆ ಮನವಿ ಸಲ್ಲಿಸಲಾಯಿತು.ರೋಲ್ಫಿ ಡಿಕೋಸ್ಟ,ಸುಭಾಸ್ ಬಿ ಶೆಟ್ಟಿ, ಸತೀಶ್ ಅಂಚನ್ ,ಮಧು ಆಚಾರ್ಯ, ಹಾಜಿ ಶೇಖಬ್ಬ ಕೋಟೆ, ನವೀನ್ ಚಂದ್ರ ಜೆ ಶೆಟ್ಟಿ, ಸನಾ ಇಬ್ರಾಹಿಂ,ಸುದೀರ್ ಕರ್ಕೇರ, ಪಾಂಡುರಂಗ ಕರ್ಕೇರ, ಸುಧಾಕರ್ ಎರ್ಮಾಳು, ನವೀನ್ ಎನ್.ಶೆಟ್ಟಿ,ಪ್ರಾಣೇಶ್ ಹೆಜಮಾಡಿ,ರವಿ ಶೆಟ್ಟಿ, ಇಕ್ಬಾಲ್ ಮುಲ್ಕಿ, ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ನಮ್ಮ ಕುಡ್ಲ ಟಾಕೀಸ್ ಆರಂಭ : ಇನ್ನು ಮನೆಯಲ್ಲೇ ಕುಳಿತು ಹೊಸ ತುಳು ಸಿನಿಮಾ ನೋಡುವ ಅವಕಾಶ -Vishwanews24