ಉಡುಪಿ ಜಿಲ್ಲಾ ಬಿಜೆಪಿ ಈ ಬಾರಿಯ ಸಾರ್ಥಕ ಅಧ್ಯಕ್ಷ ಕುಯಿಲಾಡಿ.-vishwanews24
ಉಡುಪಿ ಜಿಲ್ಲಾ ಬಿಜೆಪಿ ಈ ಬಾರಿಯ ಸಾರ್ಥಕ ಅಧ್ಯಕ್ಷ ಕುಯಿಲಾಡಿ.
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಗೆ ಈ ಬಾರಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಯಿಲಾಡಿ ಸುರೇಶ್ ನಾಯಕ್ ಸಮರ್ಥ ನಾಯಕನಾಗಿ ಮೂಡಿಬಂದಿದ್ದಾರೆ.
ಕಾರಣ ಇಷ್ಟೇ ಉಡುಪಿ ಜಿಲ್ಲೆಯಲ್ಲಿ ಅಧ್ಯಕ್ಷರಾದ ನಂತರ ಎದುರಿಸಿದ ಚುನಾವಣೆ ಮಾತ್ರವಲ್ಲದೆ ಕೋವಿಡ್ ನಿರ್ವಹಣೆಯನ್ನು ಕೂಡ ಪಕ್ಷದ ನೆಲೆಯಲ್ಲಿ ಯಾವ ರೀತಿ ಕೆಲಸ ಕಾರ್ಯವನ್ನು ಮಾಡಬೇಕು ಹಾಗೂ ಜನಸೇವೆಯನ್ನು ಪಕ್ಷದ ವತಿಯಿಂದ ಯಾವ ರೀತಿ ಮಾಡಬೇಕು ಎಂಬುದನ್ನು ಉಳಿದ ಎಲ್ಲ ರಾಜಕೀಯ ಪಕ್ಷದ ಮುಖಂಡರಿಗೆ ಪಾಠವಾಗುವ ರೀತಿಯಲ್ಲಿ ಮಾಡಿ ತೋರಿಸಿದ್ದಾರೆ.

ಜಿಲ್ಲೆಯ ವಿವಿಧ ಮೋರ್ಚಾಗಳ ಅಡಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘಟಕರಿಗೆ ಸಕಾಲದಲ್ಲಿ ಮಾಹಿತಿ ಹಾಗೂ ಸಲಹೆ ಸೂಚನೆ ನೀಡಿ ಜನಸಾಮಾನ್ಯರಿಗೆ ಆರೋಗ್ಯ ಆಹಾರ ಒದಗಿಸುವುದರ ಸೇರಿದಂತೆ ಸಂಘಟನೆಯನ್ನು ಬಲ ಪಡಿಸುವಲ್ಲಿ ಕೂಡ ಯಶಸ್ವಿಯಾಗುತ್ತಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಕಾರ್ಯಚಟುವಟಿಕೆಯ ಬಗ್ಗೆ ಕಾರ್ಯಕರ್ತರಲ್ಲಿ ಆಶಾಭಾವನೆ ಮೂಡಿದ್ದು ಯಾವುದೇ ತುರ್ತು ಕಾಲದಲ್ಲಿ ಅಧ್ಯಕ್ಷರನ್ನು ಸಂಪರ್ಕಿಸಿದರೆ ನಮ್ಮ ಎಲ್ಲಾ ಕೆಲಸವು ಸರಾಗವಾಗಿ ನಡೆಯುತ್ತಿದೆ ಎಂಬ ಆಸೆ ಹಾಗೂ ಮಂದಹಾಸ ಕಾರ್ಯಕರ್ತರಲ್ಲಿ ಮೂಡಿಸಿದೆ.

ಮಾತ್ರವಲ್ಲದೆ ಕೋವಿಡ್ ಸಮಯದಲ್ಲಿ ಕಾರ್ಯಕರ್ತರ ಮನೆ ಮನೆಗೆ ಭೇಟಿ ನೀಡುವುದು ಅದರ ಜೊತೆಗೆ ಪ್ರತಿದಿನ ಒಂದಿಷ್ಟು ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸುವುದು ಮತ್ತು ಅವರವರ ಮನೆಯ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುವುದು ಫೋನ್ ಮುಖಾಂತರ ಸಂಭಾಷಣೆ ನಡೆಸುವುದು ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಮುಖಾಂತರ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಅಥವಾ ಏನಾದರೂ ವಸ್ತುಗಳು ಬೇಕಾಗಿದ್ದಲ್ಲಿ ಕೂಡಲೇ ಅದಕ್ಕೆ ಸ್ಪಂದಿಸುವ ಮುಖಾಂತರ ಸರಕಾರದ ಜತೆ ಅಳಿಲು ಸೇವೆಯ ಸಹಕಾರ ಮಾಡುತ್ತಿದ್ದಾರೆ ಕುಯಿಲಾಡಿ ಸುರೇಶ್ ನಾಯಕ್.

ಕೇವಲ ಚುನಾವಣೆಗೆ ಕಾರ್ಯಕರ್ತರನ್ನ ಬಳಸಿಕೊಳ್ಳದೆ ಇಂತಹ ಸಂಕಷ್ಟ ಸಮಯದಲ್ಲೂ ನಮ್ಮ ಸಾಥ್ ನೀಡಿ ಸಹಕರಿಸುತ್ತಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬಗ್ಗೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.
ಬೂತ್ ಬೂತ್ ಮಟ್ಟದಲ್ಲಿ ಸಮರ್ಥವಾಗಿ ಕೋವಿಡ್ ನಿರ್ವಹಣೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸದಾ ಕಾರ್ಯಕರ್ತರ ಜತೆ ನೇರ ಸಂಪರ್ಕದಲ್ಲಿದ್ದುಕೊಂಡು ಅಲ್ಲಿನ ವಿವಿಧ ಚಟುವಟಿಕೆಯ ಬಗ್ಗೆ ಗಮನಹರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಅನ್ನುತ್ತಾರೆ ಬೂತ್ ಮಟ್ಟದ ಕಾರ್ಯಕರ್ತರು.

ಏನೇ ಆಗಲಿ ಪಕ್ಷ ಅಥವಾ ಅದರ ಸಾರಥಿ ಕೇವಲ ರಾಜಕೀಯ ಮಾಡದೇ ಜನಸೇವೆಯ ಜತೆಗೆ ಇಡೀ ಪಕ್ಷದ ಅಂಗಾಗದಂತಿರುವ ಕಾರ್ಯಕರ್ತರ ಸಂಕಷ್ಟದಲ್ಲಿಯೂ ನಿಂತು ಯಾವುದೇ ಪ್ರಚಾರ ಬಯಸದೆ ಕಾರ್ಯಕರ್ತರ ತುರ್ತು ಕರೆಗೆ ಸ್ಪಂದಿಸಿ ಕೆಲಸ ಮಾಡುವ ಮತ್ತು ಮಾಡಿಸುತ್ತಿರುವ ಇಂತಹ ನಾಯಕರು ಉಳಿದವರಿಗೂ ಮಾದರಿಯಾಗಲಿ .
ಪೊಲಿಟಿಕಲ್ ಬ್ಯೂರೋ –ವಿಶ್ವನ್ಯೂಸ್24 ಉಡುಪಿ

