ಕಾಪು: ಸೊರಕೆ ಪಕ್ಷ ನೋಡಿ ಜನಸೇವೆ ಮಾಡಿಲ್ಲ – ಜನರ ಕಷ್ಟ ನೋಡಿ ಜನಸೇವೆ ಮಾಡಿದವರು : ಡಾ ಬೆಳಪು ದೇವಿಪ್ರಸಾದ್ ಶೆಟ್ಟಿ – Vishwanews24
ಕಾಪು: ಸೊರಕೆ ಪಕ್ಷ ನೋಡಿ ಜನಸೇವೆ ಮಾಡಿಲ್ಲ – ಜನರ ಕಷ್ಟ ನೋಡಿ ಜನಸೇವೆ ಮಾಡಿದವರು : ಡಾ ಬೆಳಪು ದೇವಿಪ್ರಸಾದ್ ಶೆಟ್ಟಿ
ಕಾಪು: ಬಿಜೆಪಿಯವರು ಹಿಂದುತ್ವದ ಬಗ್ಗೆ ಮಾತನಾಡಿ ವೋಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಈಗಾಗಲೇ ಬಿಜೆಪಿಯವರ ನಕಲಿ ಹಿಂದುತ್ವ ಬಟ ಬಯಲಾಗಿದೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಮನೆ ಕಟ್ಟಿಕೊಟ್ಟದ್ದು ಒಳ್ಳೆಯ ವಿಚಾರ ಆದರೆ ಅದೇ ವಿಷಯವನ್ನು ಇಟ್ಟುಕೊಂಡು ಬಿಜೆಪಿಯವರು ಮತಯಾಚನೆ ನಡೆಸುವುದು ಎಷ್ಟು ಸರಿ.
ಕಾಂಗ್ರೆಸ್ ನಲ್ಲಿರುವ ನಾವುಗಳು ಕೂಡ ಹಿಂದುಗಳೇ ಹಿಂದೂ ದೇವಸ್ಥಾನ ಮಠ ಮಂದಿರಗಳ ಅಭಿವೃದ್ಧಿಯಲ್ಲಿ ನಮ್ಮದು ಪಾತ್ರ ಇದೆ ನಾವು ಎಂದಿಗೂ ಧರ್ಮದ ಆಧಾರದಲ್ಲಿ ಮತವನ್ನು ಪಡೆದು ರಾಜಕೀಯ ಮಾಡಿಲ್ಲ ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಒಂದೇ ತಾಯಿಯ ಮಕ್ಕಳಂತೆ ಜೀವಿಸಲು ಪ್ರಯತ್ನ ಪಡುತ್ತಿದ್ದೇವೆ ಆದರೆ ಬಿಜೆಪಿ ಅವರು ಮಾತ್ರ ಇಬ್ಬಾಗ ನೀತಿಯನ್ನು ಅನುಸರಿಸಲು ಯತ್ನಿಸುತ್ತಿದ್ದಾರೆ ಆ ಮುಖೇನವಾಗಿ ಹಿಂದುತ್ವ ಎಂಬ ಮಾತನ್ನು ಎತ್ತಿಕಟ್ಟುವ ಮುಖೇನ ಮತಯಾಚನೆ ನಡೆಸುತ್ತಿದೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಅವರ ದೂರದೃಷ್ಟಿಯ ರಾಜಕಾರಣ ಇಂದು ಕಾಪು ತಾಲೂಕು ಪುರಸಭೆ, ಪಾಲಿಟೆಕ್ನಿಕ್ ಕಾಲೇಜ್ ಸೇರಿದಂತೆ 10 ಹಲವಾರು ಯೋಜನೆಗಳು ಬಂದಿದ್ದರೆ ಅದು ವಿನಯ್ ಕುಮಾರ್ ಸೊರಕೆಯಿಂದ ಮಾತ್ರ ಇವರು ಎಂದಿಗೂ ಕೂಡ ಪಕ್ಷ ನೋಡಿ ಸೇವೆ ಮಾಡಿಲ್ಲ ರಾಜಕಾರಣ ಮಾಡಿಲ್ಲ ಜನರ ಕಷ್ಟ ನೋಡಿ ಸೇವೆಯನ್ನು ಮಾಡಿದವರು ಈ ಬಾರಿಯ ಮತ ಏನಿದ್ದರೂ ಅದು ವಿನಯ್ ಕುಮಾರ್ ಸೊರಕೆ ಪರ ಪಾಲಿಗೆ ಬರಬೇಕು ಇದು ನಮ್ಮೆಲ್ಲರ ಆಸೆ ಕಾರಣ ಕಾಪು ಕರ್ನಾಟಕದಲ್ಲಿ ಮಾದರಿ ಕಾಪು ಎಂಬ ಹೆಸರು ಪಡೆಯಬೇಕಾದರೆ ಅದು ಸೊರಕೆಯಿಂದ ಮಾತ್ರ ಸಾಧ್ಯ ಎಂದು ಸಹಕಾರಿ ಧುರಿಣ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಕಾಪುವಿನ ಮತದಾರರಿಗೆ ಎಂದಿಗೂ ಅನ್ಯಾಯ ಮಾಡದ ರಾಜಕಾರಣಿ ವಿನಯ್ ಕುಮಾರ್ ಸೊರಕೆ : vishwanews24
