ಕುಮಾರಸ್ವಾಮಿ ಅವರು ಇರೋದೇ ಕಪ್ಪು , ಹಾಗಾಗಿ ಅವರನ್ನು ಕರಿಯ ಎಂದು ಕರೆದೆ.. : ಜಮೀರ್ ಅಹ್ಮದ್ -Vishwanews24

Featured, ರಾಜ್ಯ ನ್ಯೂಸ್

ಬೆಳ್ಳಗೆ ಇರುವವರನ್ನು ಕರಿಯ ಎಂದು ಕರೆಯಲು ಆಗುತ್ತಾ?..

ಕುಮಾರಸ್ವಾಮಿ ಅವರು ಇರೋದೇ ಕಪ್ಪು , ಹಾಗಾಗಿ ಅವರನ್ನು ಕರಿಯ ಎಂದು ಕರೆದೆ..: ಜಮೀರ್ ಅಹ್ಮದ್ -Vishwanews24

ಬೀದರ್,  (Vishwanews24): ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಸಂಬೋಧಿಸಿದ ಕಾರಣ ಜೆಡಿಎಸ್‌ ನಾಯಕರ ಹಾಗೂ ಕಾರ್ಯಕರ್ತರ ಟೀಕೆ ಒಳಗಾಗಿದ್ದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್, “ಕುಮಾರಸ್ವಾಮಿ ಅವರು ಇರೋದೇ ಕಪ್ಪು, ಹಾಗಾಗಿ ಬೆಳ್ಳಗೆ ಇರುವವರನ್ನು ಕರಿಯ ಎಂದು ಕರೆಯಲು ಆಗುತ್ತಾ?. ಅವರು ಕಪ್ಪು ಇರುವ ಕಾರಣ ಅವರನ್ನು ಕರಿಯ ಎಂದು ಕರೆದೆ. ನಾನು ಅವರನ್ನು ಕರಿಯ ಎಂದು ಕರೆದಿದ್ದು ತಪ್ಪು ಎಂದಾದರೆ ಅವರು ನನ್ನ ಮೇಲೆ ದೂರು ನೀಡಲಿ” ಎಂದಿದ್ದಾರೆ.

ಮಂಗಳೂರು : ಕರಾವಳಿಯಲ್ಲಿ ಪ್ರಯಾಣಿಕರಿಗೆ ತಟ್ಟದ ಮುಷ್ಕರ ಬಿಸಿ , 20ಕ್ಕೂ ಅಧಿಕ KSRTC ಬಸ್ ಓಡಾಟ -Vishwanews24

“ಜೆಡಿಎಸ್‌ ಕಾರ್ಯಕರ್ತರು ನನ್ನ ನಿವಾಸದ ಮುಂದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ, ದೇವರು ನನಗೆ ಹೈಟ್‌ ನೀಡಿಲ್ಲ. ಹಾಗಾಗಿ ಅವರು ನನ್ನನ್ನು ಕುಳ್ಳ ಎಂದು ಕರೆದರೆ ನನಗೆ ಬೇಸರವಿಲ್ಲ” ಎಂದು ಹೇಳಿದ್ದಾರೆ.

“ಹೆಚ್‌ಡಿಕೆ ಅವರು ವಿದೇಶದವರ ರೀತಿ ಇದ್ದರೆ ನಾನು ನೀಡಿದ ಹೇಳಿಕೆ ತಪ್ಪಾಗುತ್ತಿತ್ತು. ಹುಟ್ಟಿದಾಗಲೇ ದೇವರು ಅವರನ್ನು ಕರ್‍ರಗೆ ಮಾಡಿ ಭೂಮಿಗೆ ಕಳುಹಿಸಿದ್ದಾರೆ. ಹಾಗಾಗಿ ಅವರು ಕಪ್ಪಗೆ ಇದ್ದಾರೆ. ಹಾಗಾಗಿ ನನ್ನ ಹೇಳಿಕೆ ಹೇಗೆ ತಪ್ಪಾಗಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರ್ಪಡೆ -Vishwanews24