ಮಂಗಳೂರು : ಕರಾವಳಿಯಲ್ಲಿ ಪ್ರಯಾಣಿಕರಿಗೆ ತಟ್ಟದ ಮುಷ್ಕರ ಬಿಸಿ , 20ಕ್ಕೂ ಅಧಿಕ KSRTC ಬಸ್ ಓಡಾಟ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಕರಾವಳಿಯಲ್ಲಿ ಪ್ರಯಾಣಿಕರಿಗೆ ತಟ್ಟದ ಮುಷ್ಕರ ಬಿಸಿ , 20ಕ್ಕೂ ಅಧಿಕ KSRTC ಬಸ್ ಓಡಾಟ -Vishwanews24

ಮಂಗಳೂರು (Vishwanews24): ಕೆಎಸ್ಆರ್ ಟಿಸಿ ನೌಕರರು ಆರನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಖಾಸಗಿ ಮತ್ತು ಸಿಟಿ ಬಸ್ ಗಳೂ ಎಂದಿನಿಂದ ಇಂದೂ ಕೂಡಾ ಕಾರ್ಯಾಚರಣೆ ನಡೆಸಿದ್ದು ಹೀಗಾಗಿ ಕರಾವಳಿಯಲ್ಲಿ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿಲ್ಲ.

ಈ ನಡುವೆ ಮಂಗಳೂರು ಕೆಎಸ್ಆರ್ ಟಿಸಿ ವಿಭಾಗದಲ್ಲಿ ಏ.೮ ರ ಗುರುವಾರದಂದು ಮುಷ್ಕರ ಕೊಂಚ ನೀರಸವಾಗಿದೆ. ಗುರುವಾರ ಬೆಳಗ್ಗೆ ಧರ್ಮಸ್ಥಳ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಸರಗೋಡಿಗೆ ಬಸ್ ಗಳ ಸಂಚಾರ ನಿಧಾನವಾಗಿ ಪ್ರಾರಂಭವಾಗಿದೆ.

ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರ್ಪಡೆ -Vishwanews24

ಎರಡನೇ ದಿನ ಈವರೆಗೆ ವಿವಿಧ ರೂಟ್ ಗಳಲ್ಲಿ ಸುಮಾರು 20ಕ್ಕೂ ಅಧಿಕ ಬಸ್ ಗಳ ಓಡಾಟ ನಡೆಸಿದೆ. ಹೀಗಾಗಿ ಸರ್ಕಾರಿ ಬಸ್ ನಿಲ್ದಾಣದತ್ತ ನಿಧಾನವಾಗಿ ಪ್ರಯಾಣಿಕರು ಆಗಮಿಸತೊಡಗಿದ್ದಾರೆ.

ನಿನ್ನೆಯೇ ಬಹುತೇಕ ಕೆಎಸ್ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದು, ಇಂದೂ ಕೂಡಾ ಪರಿಸ್ಥಿತಿ ಅದೇ ರೀತಿ ಮುಂದುವರಿದಿದೆ. ಇಂದು ಬೆಳಗ್ಗೆಯಿಂದ ಬೆರಳೆಣಿಕೆಯಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಈ ಹಿನ್ನೆಲೆಯಲ್ಲಿ ದೂರ ಪ್ರಯಾಣದ ಕೆಲವೊಂದು ಬಸ್ ಗಳು ಸಂಚಾರ ನಡೆಸಿವೆ. ಆದರೆ ನಗರದೊಳಗೆ ಬಸ್ ಸಂಚಾರ ಮಾಡುವ ಪ್ರಯಾಣಿಕರಿಗೆ ತೊಂದರೆಯಾಗಿಲ್ಲದಿದ್ದರೂ, ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸಿದ್ದರು.

ಬೆಳ್ತಂಗಡಿ : ಯುವತಿಗೆ ಚೂರಿ ಇರಿತ ; ಆರೋಪಿಯ ಬಂಧನ -Vishwanews24