ಕೊರೋನ ವೈರಸ್ ಸಂಹಾರಕ್ಕಾಗಿ ಕಾಪು ಶ್ರೀ ಹೊಸ ಮಾರಿಯಮ್ಮ ದೇಗುಲದಲ್ಲಿ ವಿಶೇಷ ಪ್ರಾರ್ಥನೆ -Vishwanews24
ಕೊರೋನ ವೈರಸ್ ಸಂಹಾರಕ್ಕಾಗಿ ಕಾಪು ಶ್ರೀ ಮಾರಿಯಮ್ಮ ನಲ್ಲಿ ವಿಶೇಷ ಪ್ರಾರ್ಥನೆ.
ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಜಗತ್ತನ್ನೇ ವ್ಯಾಪಿಸುತ್ತಿರುವ ಕೊರೋನ ವೈ ರಸ್ ನಿಮೂ೯ಲನೆ ಮಾಡುವಂತೆ ಸಾಂಕ್ರಾಮಿಕ ರೋಗ ಗಳ ಸಂಹಾರಕಿ ಎಂದೇ ಖ್ಯಾತಿ ಪಡೆದಿರುವ ಮಹಾ ಮಾತೆ ಮಾರಿಯಮ್ಮ ನಲ್ಲಿ ವಿನಮ್ರವಾಗಿ ಪ್ರಾಥಿ೯ಸಲಾಯಿತು.
ಶ್ರೀ ಮಾರಿಯಮ್ಮ ತಾಯಿಯು ತನ್ನ ಭಕ್ತರಿಗೆ ಯಾವುದೇ ಭಯ ಬೇಡ ಅತೀ ಶೀಘ್ರದಲ್ಲಿ ಸಾಂಕ್ರಾಮಿಕ ರೋಗವನ್ನು ನಿಮೂ೯ಲನೆಗೊಳಿಸಿ ದೇಶಾದ್ಯಂತ ಇರುವ ಭಕ್ತರನ್ನು ರಕ್ಷಿಸುತ್ತೇನೆ ಎಂಬ ಅಭಯ ವಾಕ್ಯ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ,ಕೆ.ವಾಸುದೇವ ಶೆಟ್ಟಿ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಾದ, ರಮೇಶ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾದ ಚಂದ್ರಶೇಖರ ಅಮೀನ್,ಜಗದೀಶ್ ಬಂಗೇರ ಹಾಗೂ ಶ್ರೀ ದೇವಳದ ಕಾಯ೯ನಿರ್ವಹಣಾಧಿ ಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಜರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು
