ಚುನಾವಣೆ ಹತ್ರ ಬಂದಾಗ ಕರ್ನಾಟಕ ನೆನಪಾಗುತ್ತದೆ : ಮೋದಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ – Vishwanews24
ಚುನಾವಣೆ ಹತ್ರ ಬಂದಾಗ ಕರ್ನಾಟಕ ನೆನಪಾಗುತ್ತದೆ : ಮೋದಿ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ
ಬೆಂಗಳೂರು: ರಾಜ್ಯಕ್ಕೆ ಆಗಾಗ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಜನರು ಬರ ಬಂದು ಸಾಯುತ್ತಿರುವಾಗ ಬರಲಿಲ್ಲ , ಅದಕ್ಕೆ ಪರಿಹಾರವೂ ಕೊಡಲಿಲ್ಲ ಆದರೆ ಚುನಾವಣೆ ಹತ್ರ ಬಂದಾಗ ಕರ್ನಾಟಕ ನೆನಪಾಗುತ್ತದೆ ಎಂದು ಹೇಳಿದ್ದಾರೆ.ರಾಜ್ಯದ ವಿವಿಧ ಯೋಜನೆಗಳು , ಜೆಎಸ್ ಟಿ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಟ್ವೀಟರ್ ನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1
ಪ್ರಧಾನಿ ಮೋದಿ ಇಂದು ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ.
ಅವರಿಗೆ ಸ್ವಾಗತ.
ಆದರೆ ನೆರೆ ಬಂದು ರಾಜ್ಯದ ಜನರು ಕೊಚ್ಚಿ ಹೋಗುವಾಗ ಬರಲಿಲ್ಲ ಮೋದಿ.
ಬರ ಬಂದು ಜನ ಸಾಯುತ್ತಿರುವಾಗಲೂ ಬರಲಿಲ್ಲ.
ನೆರೆ ಪರಿಹಾರ ಕೊಡಲಿಲ್ಲ, ಅತ್ತ ಬರ ಪರಿಹಾರ ಕೊಡಲಿಲ್ಲ.
ಈಗ ಚುನಾವಣಾ ಸಮಯ.
ಚುನಾವಣೆಯ ಸಮಯದಲ್ಲೇ ಮೋದಿಯವರಿಗೆ ಕರ್ನಾಟಕದ ನೆನಪಾಗುತ್ತದೆಯೆ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 27, 2023
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಜಿಎಸ್ ಟಿ ನಷ್ಟ ಪರಿಹಾರ ಕೊಡದಿದ್ದಾಗ ಮೋದಿಯವರಿಗೆ ಕರ್ನಾಟಕ ನೆನಪಾಗಲಿಲ್ಲ. ಮಹದಾಯಿ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಲ್ಲಿ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿರುವಾಗ ಕರ್ನಾಟಕ ನೆನಪಾಗಲಿಲ್ಲ ಎಂದು ಮೊದಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
