ತುಳುನಾಡಿನ ಧೈವರಾಧನೆ ಕತ್ತಲೆ ಇಲ್ಲದ ಬೆಳಕು: ಮಟ್ಟಾರ್ ರತ್ನಾಕರ್ ಹೆಗ್ಡೆ: vishwanews24

Featured, ಉಡುಪಿ

ತುಳುನಾಡಿನ ಧೈವರಾಧನೆ ಕತ್ತಲೆ ಇಲ್ಲದ ಬೆಳಕು: ಮಟ್ಟಾರ್ ರತ್ನಾಕರ್ ಹೆಗ್ಡೆ

ಕಾಪು ಬಡಗು ಕಲ್ಯಾದ ಬಬ್ಬುಸ್ವಾಮಿ ದೈವಸ್ಥಾನದ ಧಾರ್ಮಿಕ ಸಭೆಯಲ್ಲಿ ಹೇಳಿಕೆ

ಕಾಪು: ಇಲ್ಲಿನ ಬಡಗು ಕಲ್ಯದಲ್ಲಿ ನಿರ್ಮಿಸಿರುವ ಬಬ್ಬುಸ್ವಾಮಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ -ಕಲಾಶಭೀಷೆಕ-ನೇಮೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಆದಿತ್ಯವಾರ ನಡೆಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ” ತುಳುನಾಡು ಕತ್ತಲೆ ಇಲ್ಲದ ಭೂಮಿ ,ಹಗಲು ಪ್ರಕೃತಿ ಬೆಳಕು ನೀಡಿದರೆ ರಾತ್ರಿ ತುಳುನಾಡಿನಲ್ಲಿ ಧೈವರಾಧನೆಯ ಬೆಳಕು ಹರಿಯುತ್ತಿದೆ ಹಾಗಾಗಿ ಇದೊಂದು ಉನ್ನತ ಮಟ್ಟದ ಆರಾಧನೆ ಯಾಗಿದೆ,ಪ್ರಸ್ತುತ ಅವಿಭಕ್ತ ಕುಟುಂಬ ನಶಿಸಿ ವಿಭಕ್ತ‌ ಕುಟುಂಬವಾಗಿ ಪರಿವರ್ತನೆಯಾಗುತ್ತಿದೆ ಆದರೇ ದೈವದ ಚಾಕರಿ ,ಆರಾಧನೆ,ವಿಚಾರ ಬಂದಾಗ ಅವಿಭಕ್ತವಾಗಿ ಸೇರಿಕೊಂಡು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಾಲು ಮಾರಾಟ ಮಹಾಮಂಡಳಿ ಬೆಂಗಳೂರು ಇದರ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ,ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೆಸರ ರಮೇಶ್ ಹೆಗ್ಡೆ ಕಲ್ಯಾ,ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಕಾಪು,ಸ್ಥಳ ದಾನಿ ರಾಜು ಶೆಟ್ಟಿ,ಕಲ್ಯಾ ದಿನೇಶ್ ಶೆಟ್ಟಿ, ಉದ್ಯಮಿ ಉಮನಾಥ ಶೆಟ್ಟಿ, ಪುರಸಭಾ ಸದಸ್ಯ ಸುರೇಶ್ ದೇವಾಡಿಗ,ಶೀನ‌ಮುಖಾರಿ,ಉಪಸ್ಥಿತರಿದ್ದರು.
ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಕನ್ಯಾನಗುತ್ತು ಸ್ವಾಗತಿಸಿ ,ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ,ಅರುಣ್ ಶೆಟ್ಟಿ ಪಾದೂರು ಧನ್ಯವಾದ ಸಮರ್ಪಿಸಿದರು.
ವರದಿ: ಪುರುಷೋತ್ತಮ ಕಾಪು

Leave a Reply