ದೇಶದ ಆರ್ಥಿಕಕತೆ ಪ್ರಪಾತಕ್ಕೆ ಬಿದ್ದಿದೆ : ಈಶ್ವರ್ ಖಂಡ್ರೆ -Vishwanews24

Featured, ರಾಜ್ಯ ನ್ಯೂಸ್

ದೇಶದ ಆರ್ಥಿಕಕತೆ ಪ್ರಪಾತಕ್ಕೆ ಬಿದ್ದಿದೆ : ಈಶ್ವರ್ ಖಂಡ್ರೆ -Vishwanews24

ಬೆಂಗಳೂರು: ದೇಶದ ಆರ್ಥಿಕಕತೆ ಪ್ರಪಾತಕ್ಕೆ ಬಿದ್ದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಸರ್ಕಾರ ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ದೇವರ ಮೇಲೆ ಹೊರೆ ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ACT OF GOD ಎನ್ನುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಈಗ ದೇಶದ ಆರ್ಥಿಕತೆಯನ್ನ ಇನ್ನಷ್ಟು ಪ್ರಪಾತಕ್ಕೆ ತಳ್ಳಿರುವುದು ಅಂಕಿಅಂಶ ಸಮೇತವಾಗಿ ರುಜುವಾತಾಗಿದೆ. ದೇಶದ ಜಿಡಿಪಿ ಶೇಕಡ 29.9 ರಷ್ಟು ಋಣಾತ್ಮಕ ಕುಸಿತ ಕಂಡಿದೆ.

ಇದು ಸಾರ್ವಕಾಲಿಕ ಕುಸಿತ ಎಂದೇ ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಿದ್ದು ದೇಶದಲ್ಲಿ ಎಲ್ಲವು ಸರಿ ಇದೆ ಎಂಬಂತೆ ಬಿಂಬಿಸುತ್ತಾ ಕೇವಲ ಚಪ್ಪಾಳೆ ಹೊಡೆದು ದೀಪ ಹಚ್ಚಿ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟು ಇನ್ನೆಷ್ಟು ದಿನ ಜನರನ್ನ ಕತ್ತಲಲ್ಲಿಡುತ್ತಿರಿ ಪ್ರಧಾನಿಗಳೇ..? ಉತ್ತರಿಸಿ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/eshwar_khandre/status/1300671052465356805?ref_src=twsrc%5Etfw%7Ctwcamp%5Etweetembed%7Ctwterm%5E1300671052465356805%7Ctwgr%5E&ref_url=https%3A%2F%2Fvijaykarnataka.com%2Fnews%2Fworld%2Fshocking-video-doctors-pull-4-foot-snake-out-of-womans-mouth-in-russia%2Farticleshow%2F77866965.cms