ನನಗೆ ರಾಜಕೀಯ ಅನಿವಾರ್ಯವಲ್ಲ, ಮಂಡ್ಯದ ಜನತೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ : ಸುಮಲತಾ ಅಂಬರೀಷ್ – Vishwanews24

Featured, ರಾಜ್ಯ ನ್ಯೂಸ್

ನನಗೆ ರಾಜಕೀಯ ಅನಿವಾರ್ಯವಲ್ಲ, ಮಂಡ್ಯದ ಜನತೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ : ಸುಮಲತಾ ಅಂಬರೀಷ್ – Vishwanews24

ಮಂಡ್ಯ : ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಮಾದ್ಯಮಗಳ ಜತೆ ಮಾತನಾಡಿ ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯವಲ್ಲ, ಮಂಡ್ಯ, ಮಂಡ್ಯದ ಜನತೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು

ಮಂಡ್ಯ ಜನರ ಋಣ ತಿರಿಸಲು ಮಂಡ್ಯದಲ್ಲಿದ್ದೇನೆ . ಮಂಡ್ಯ ನನ್ನನು ಬಿಡಲ್ಲ, ನಾನು ಬಿಟ್ಟು ಹೋಗಲ್ಲ. ನಾನು ಯಾವಾಗಲು ಮಂಡ್ಯದಲ್ಲೇ ಇರುತ್ತೇನೆ. ಮಂಡ್ಯದ ಜನತೆಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಚುನಾವಣೆ ಹತ್ತಿರ ಬಂದ ನನ್ನ ಬಗ್ಗೆ ಸುಳ್ಳು ಸುದ್ದಿ ಹರಿಸುತ್ತಾರೆ ಎಂದು ಮಂಡ್ಯದಲ್ಲಿ ಸುಮಲತಾ ಅಂಬರೀಷ್‌ ಹೇಳಿಕೆ ನೀಡಿದ್ದಾರೆ.

ಕೆಲವರು ಕೆಡಿಟ್‌ಗಾಗಿ ಕೆಲಸ ಮಾಡಿಸುತ್ತಾರೆ. ನಾನು ಯಾವುದೇ ಕೆಡಿಟ್‌ಗಾಗಿ ಕೆಲಸ ಮಾಡಲ್ಲ ನನಗೆ ಕೆಡಿಟ್‌ ಬೇಡ. ಎಲ್ಲಾ ಕೆಲಸ ಅವರೇ ಮಾಡಿಸುತ್ತಾರೆ . ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ನನಗೆ ಯಾರ ಮೇಲೂ ಕೋಲ್ಡ್‌ ವಾರ್‌ ಇಲ್ಲ ನನ್ನಿಂದ ಯಾವುದೇ ಕಾಮಗಾರಿ ವಿಳಂಬವಾಗಿಲ್ಲ ಪರೋಕ್ಷವಾಗಿ ಪ್ರತಾಪ್‌ ಸಿಂಹ ವಿರುದ್ಧ ಸುಮಲತಾ ಕಿಡಿ ಕಾರಿದ್ದಾರೆ.

ಮಂಗಳೂರು :ಅಗ್ನಿಪಥ್ ಮೂಲಕ ಅರ್ಜಿ ಹಾಕಿದವರು ನಿರುದ್ಯೋಗಿಗಳು, ಸೇನಾ ಅಕಾಂಕ್ಷಿಗಳಲ್ಲ : ರಮಾನಾಥ್ ರೈ – Vishwanews24

Leave a Reply