ನ್ಯಾಯ-ನೀತಿ-ಧರ್ಮ-ಸತ್ಯ ರಾಜಕಾರಣ ಮಾಡಿದವರು ಸೊರಕೆ : ಅನಿವಾಸಿ ಭಾರತೀಯ ಸುಂದರಾಮ್ ಶೆಟ್ಟಿ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ಉಡುಪಿ

ನ್ಯಾಯ-ನೀತಿ-ಧರ್ಮ-ಸತ್ಯ ರಾಜಕಾರಣ ಮಾಡಿದವರು ಸೊರಕೆ : ಅನಿವಾಸಿ ಭಾರತೀಯ ಸುಂದರಾಮ್ ಶೆಟ್ಟಿ

ಕುವೈಟ್ : ಸುಮಾರು 45 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ವಿನಯ್ ಕುಮಾರ್ ಸೊರಕೆ ಇವತ್ತಿನವರೆಗೂ ನ್ಯಾಯ ನೀತಿ ಧರ್ಮ ಸತ್ಯದ ಪ್ರಕಾರವಾಗಿ ರಾಜಕಾರಣ ಮಾಡಿದವರು ವೈಯಕ್ತಿಕವಾಗಿ ದುಡ್ಡು ಮಾಡಿ ಯಾರಿಂದಲೂ ಮೋಸ ಮಾಡಿದ ವ್ಯಕ್ತಿ ಅಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟು ಸಾವಿರಾರು ಕೋಟಿ ರೂಪಾಯಿಯನ್ನು ಕಾಪುಗೆ ತಂದುಕೊಟ್ಟವರು ವಿನಯ್ ಕುಮಾರ್ ಸೊರಕೆ .

ಅನಿವಾಸಿ ಭಾರತೀಯರಾದ ನಮಗೆಲ್ಲರಿಗೂ ಅವರೊಂದು ಶ್ರೀರಕ್ಷೆ ಯಾವುದೇ ಸಮಯದಲ್ಲೂ ಆದರೂ ಕರೆ ಮಾಡಿದಾಗ ತುರ್ತಾಗಿ ನಮ್ಮ ಊರಿನ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದರಿಂದ ವಿನಯ್ ಕುಮಾರ್ ಸೊರಕೆ ಅವರಿಗೆ ಕಾಪುವಿನ ಜನ ಮತ ಹಾಕಿ ಗೆಲ್ಲಿಸುತ್ತಾರೆಂಬ ನಂಬಿಕೆ ನಮಗೂ ಇದೆ.

ಕಾಪು: ಕೋವಿಡ್ ಸಮಯ ಜಾತಿ ಧರ್ಮ ನೋಡದೆ ಉಪಕಾರ ಮಾಡಿದ್ದ ಗುರ್ಮೆ ಸುರೇಶ್ ಶೆಟ್ಟಿ :  ಅನಿಲ್ ಮಾಬೆಲ್ – Vishwanews24

ಮಾತ್ರವಲ್ಲದೆ ಈ ಬಾರಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಸೊರಕೆಯವರು ಗೆದ್ದು ಚುನಾವಣೆಯನ್ನು ರಾಜಕೀಯ ನಿವೃತ್ತಿ ಘೋಷಣೆ ಮಾಡಿಸಬೇಕು ಹೊರತು ಸೋತು ರಾಜಕೀಯ ನಿವೃತ್ತಿ ಘೋಷಣೆ ಮಾಡಬಾರದು ಎಂಬುದು ನಮ್ಮೆಲ್ಲರ ಆಸೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸರ್ವ ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ವಿನಯ್ ಕುಮಾರ್ ಸೊರಕೆ ಅವರು ಬಹುಮತದ ಅಂತರದಿಂದ ಗೆಲ್ಲಿಸಿ ಕೊಡುವ ಜವಾಬ್ದಾರಿ ನಮ್ಮ ಊರಿನ ಜನತೆಯ ಮೇಲಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಸುಂದರಾಂ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ : ಯಶ್ ಪಾಲ್ ಸುವರ್ಣ ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಜನ ಸಾಮಾನ್ಯರ ಸೇವೆಗೆ ಅವಕಾಶ ನೀಡಿ : ಪ್ರಮೋದ್ ಮಧ್ವರಾಜ್ – Vishwanews24

Leave a Reply