ಪುತ್ತೂರು : ಕರಾವಳಿ ಬಿಜೆಪಿಯ ಭೀಷ್ಮ ಉರಿಮಜಲು ರಾಮ ಭಟ್ ಪಂಚಭೂತಗಳಲ್ಲಿ ಲೀನ – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು : ಕರಾವಳಿ ಬಿಜೆಪಿಯ ಭೀಷ್ಮ ಉರಿಮಜಲು ರಾಮ ಭಟ್ ಪಂಚಭೂತಗಳಲ್ಲಿ ಲೀನ ; ಗಣ್ಯರಿಂದ ಅಂತಿಮ ದರ್ಶನ – Vishwanews24

ಪುತ್ತೂರು: ಸೋಮವಾರ ಸಂಜೆ ನಿಧನರಾದ, ನಾಡಿನ ಹಿರಿಯ ರಾಜಕೀಯ ಮುಖಂಡ, ಕರಾವಳಿ ಬಿಜೆಪಿಯ ಭೀಷ್ಮ ಉರಿಮಜಲು ರಾಮ ಭಟ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಂಗಳವಾರ ನಡೆಯಿತು. ಮಂಗಳವಾರ ಬೆಳಗ್ಗೆ ಅಗಲಿದ ನಾಯಕನ ಪಾರ್ಥೀವ ಶರೀರ ನೆಹರೂನಗರದ ವಿವೇಕಾನಂದ ವಿದ್ಯಾಸಂಸ್ಥೆಗಳ ವಠಾರಕ್ಕೆ ತರಲಾಯಿತು. ಅಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು.

ಪುತ್ತೂರು: ದ.ಕ. ಬಿಜೆಪಿಯ ಭೀಷ್ಮ ಮಾಜಿ ಶಾಸಕ ರಾಮ್ ಭಟ್ ಪಾರ್ಥಿವ ಶರೀರದ ಅಂತಿಮ ನಮನ ; ಪ್ರಧಾನಿಯಿಂದ ಸಂತಾಪ – VIshwanews24

ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ. ಪುರಾಣಿಕ್, ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸೇರಿದಂತೆ ನೂರಾರು ಮಂದಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಶೈಕ್ಷಣಿಕ ರಂಗದ ಮುಖಂಡರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ನಮನ ಸಲ್ಲಿಸಿದರು.

ಪುತ್ತೂರು, ಸುಳ್ಯ, ಮಂಗಳೂರು, ಕಾಸರಗೋಡು ಸೇರಿದಂತೆ ಕರಾವಳಿಯ ನಾನಾ ಭಾಗಗಳಿಂದ ಬಂದಿದ್ದ ಸಾರ್ವಜನಿಕರು, ಮುಖಂಡರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಪುತ್ತೂರು ನಗರದ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಮಡಿವಾಳಕಟ್ಟೆ ಎಂಬಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯಿತು. ೯೨ ವರ್ಷಗಳ ಕಾಲ ಸುದೀರ್ಘ ಜೀವನದಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿ ಶುದ್ಧಹಸ್ತ, ಪ್ರಾಮಾಣಿಕ ನೇತಾರ, ಧೀಮಂತ ನಾಯಕ ಎಂಬ ಹೆಸರು ಗಳಿಸಿದ್ದ ಉರಿಮಜಲ್ ರಾಮ ಭಟ್ ಪಂಚಭೂತಗಳಲ್ಲಿ ಲೀನರಾದರು.

ಬಿಜೆಪಿ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವತ್ತೂ ಸ್ವಾಗತ : ನಳೀನ್ – Vishwanews24