ಸೋಮವಾರ 27/12/2021 ರಂದು ಪುರಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ ಅಧಿಕಾರದಲ್ಲಿದ್ದ ಮತ್ತು ಚುನಾವಣೆಯಲ್ಲಿರುವ ರಾಜಕೀಯ ಪಕ್ಷ ಮತ್ತು ಪುರಸಭಾ ಸದಸ್ಯರಿಂದ ಕಾಪುವಿನ ಜನತೆಗೆ ಮೂಲಭೂತ ಸೌಲಭ್ಯ , ಭ್ರಷ್ಟಚಾರ ರಹಿತ ಆಡಳಿತ ,ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಜನತೆಗೆ ತಲುಪಿಸುವಲ್ಲಿ ಮತ್ತು ಬಳಸುವಲ್ಲಿ ವಿಫುಲವಾಗಿದೆ .ಈ ಮೊದಲು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತದಾರರ ಧ್ವನಿಯಾಗದೆ ಪಕ್ಷದ ನಾಯಕರ ದ್ವನಿಯಾಗಿದ್ದು ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸಲಾಗಲಿಲ್ಲ. .ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತನ್ನ ಎರಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರನ್ನು ಎರಡೂ ವಾರ್ಡಿನ ಮತದಾರರು ಗೆಲ್ಲಿಸಿದಲ್ಲಿ ಅಭ್ಯರ್ಥಿಗಳು ತಮ್ಮ ಮತದಾರರ ಧ್ವನಿಯಾಗಲಿದ್ದು, ಸರಕಾರದ ವತಿಯಿಂದ ಬರುವ ಅನುದಾನವನ್ನು ಸಮಗ್ರವಾಗಿ ಆಯಾ ವಾರ್ಡಿನ ಅಭಿವೃದ್ಧಿಗಾಗಿ ವಿನಿಯೋಗಿಸಲಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಕಾಪುವಿನ ಪರಿಸರದಲ್ಲಿ ಜನಮನ್ನಣೆ ಪಡೆದ, ಸ್ವಚ್ಛ ಹಸ್ತದ, ಎಲ್ಲ ವರ್ಗಗದವರನ್ನು ಸರಿದೂಗಿಸಿ ಕೊಂಡೊಯ್ಯುವ ,ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಮೌಲ್ಯಕ್ಜೆ ಭದ್ದರಾಗಿದ್ದು ಪುರಸಭೆಯ ಚಟುವಟಿಕೆಗಳ ಕುರಿತು ಅಪಾರ ಅನುಭವವಿರುವ ಮತ್ತು ಅನುದಾನಗಳನ್ನು ಬಗ್ಗೆ ತಿಳುವಳಿಕೆಯುಳ್ಳ ,ಗ್ರಾಮಸ್ಧರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ನೀಡಬಲ್ಲ ಇಬ್ಬರು ಪ್ರಾಮಾಣಿಕ ಅಭ್ಯರ್ಥಿಗಳನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಿಲ್ಲಿಸಿದೆ ಈ ಇಬ್ಬರು ಅಭ್ಯರ್ಥಿಗಳು ಅನ್ವರ್ ಅಲಿಕ ಕಾಪು ಮತ್ತು ಗುಲ್ಶನ್ ಮೊಹಮ್ಮದ್ ವಾರ್ಡಿನ ಜನಮನ್ನಣೆ ಪಡೆದವರಾಗಿದ್ದು,ವಾರ್ಡಿನ ಪರಿಸರದವರಾಗಿದ್ದು ಇವರನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕೆಂದು ಕಾಪುವಿನ 17ನೇ ವಾರ್ಡ್ ಬಡಗರುಗುತ್ತು ಮತ್ತು 18 ನೇ ವಾರ್ಡ್ ಕೊಂಬಗುಡ್ಡೆಯ ಮತದಾರ ಬಂಧುಗಳಾದ ತಮ್ಮಲ್ಲಿ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.
ಅಬ್ದುಲ್ ಅಝೀಝ್ ಉದ್ಯಾವರ,
ಜಿಲ್ಲಾಧ್ಯಕ್ಷರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ.
ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ…
ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್ ಸಾವು ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು…
ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ…
ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ…
ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ ಕುಂದಾಪುರ : ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ…
2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು .. ಅಕ್ರಮ ನಡೆದಿದ್ದರೆ 2018ರ ಹಿಂದೆ…