ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಕೇಳಿ ಸಿಕ್ಕಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಜರ್ನಿಗೆ ಶುಭಾಶಯ ಕೋರಿದ್ದಾರೆ.
ಮಂಗಳೂರು: ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸಿದ್ರೆ ಅಲ್ಲಿ ನೀಡುವ ಸೂಚನೆಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಅಲ್ಲಿ ಒಂದಷ್ಟು ಸಮಾನ್ಯ ವಿಚಾರ ಇರುತ್ತೆ. ವಿಮಾನದಲ್ಲಿನ ಪ್ರಯಾಣ, ನಡವಳಿಕೆಗಳ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ಅಲ್ಲಿ ಹೇಳುತ್ತಾರೆ. ಆದರೆ ಈಗ ಈ ಸೂಚನೆಗಳ ಅನೌನ್ಸ್ಮೆಂಟ್ ತುಳು ಭಾಷಿಕರಲ್ಲಿ ಹೊಸ ಆಸಕ್ತಿ ಮೂಡಿಸಿದೆ. ಅದಕ್ಕೆ ಕಾರಣ ವಿಮಾನದಲ್ಲಿ ಮಾಡಲಾದ ತುಳು ಭಾಷೆಯ ಅನೌನ್ಸ್ಮೆಂಟ್.
ಮಹಾರಾಷ್ಟ್ರದ ಮುಂಬೈ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ತುಳು ಭಾಷೆಯಲ್ಲಿ ಕೂಡ ಸೂಚನೆ ಕೊಡಲಾಗಿದೆ. ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಕೇಳಿ ಸಿಕ್ಕಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಜರ್ನಿಗೆ ಶುಭಾಶಯ ಕೋರಿದ್ದಾರೆ.
ವಿಮಾನಗಳಲ್ಲಿ ಇಂತಹ ಸೂಚನೆ ಅಥವಾ ಅನೌನ್ಸ್ಮೆಂಟ್ಗಳನ್ನು ಮಾಡುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಲಾಗುತ್ತದೆ. ಇನ್ನು ಅಂತರಾಷ್ಟ್ರೀಯ ವಿಮಾನಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿದರೆ, ಡೊಮೆಸ್ಟಿಕ್ ವಿಮಾನಗಳಲ್ಲಿ ಇಂಗ್ಲೀಷ್ ಜೊತೆ ಹಿಂದಿ ಭಾಷೆಯನ್ನು ಬಳಸುತ್ತಾರೆ. ಆದರೆ ಪ್ರಾದೇಶಿಕ ಭಾಷೆಯನ್ನು ಬಳಸೋದು ವಿರಳವಾಗಿದ್ದು ತುಳು ಭಾಷೆಯನ್ನು ಬಳಸಿದ್ದು ಈಗ ತುಳುವರಿಗೆ ಹೆಮ್ಮ ಪಡುವ ವಿಚಾರವಾಗಿದೆ. ಇನ್ನು ಪೈಲಟ್ ತುಳು ಜೊತೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಅನೌನ್ಸ್ಮೆಂಟ್ ಮಾಡಿದ್ದಾರೆ.
ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ…
ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್ ಸಾವು ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು…
ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ…
ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ…
ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ ಕುಂದಾಪುರ : ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ…
2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು .. ಅಕ್ರಮ ನಡೆದಿದ್ದರೆ 2018ರ ಹಿಂದೆ…