ಬಡವರಿಗೆ ಮನೆ ಮತ್ತು 94ಸಿ/ಸಿಸಿ ಹಕ್ಕು ಪತ್ರ ವಿತರಣೆ ಕಾರ್ಯ ಚುರುಕುಗೊಳಿಸಲು ಕಾಪುವಿನಲ್ಲಿ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ : vishwanews24
ಬಡವರಿಗೆ ಮನೆ ಮತ್ತು 94ಸಿ/ಸಿಸಿ ಹಕ್ಕು ಪತ್ರ ವಿತರಣೆ ಕಾರ್ಯ ಚುರುಕುಗೊಳಿಸಲು ಕಾಪುವಿನಲ್ಲಿ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ : vishwanews24
ಕಾಪು: ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ ಮನೆ ನಿವೇಶನ ಕೋರಿ ಸಲ್ಲಿಸಿರುವ ಅರ್ಜಿಗಳ ಮಂಜುರಾತಿ ಮತ್ತು ಮಂಜೂರಾದ ನಿವೇಶನಗಳಿಗೆ ಹಕ್ಕು ಪತ್ರ ನೀಡಬೇಕು ಹಾಗೂ ಕಳೆದ ನಾಲ್ಕು ವರ್ಷದ ಬಿಜೆಪಿ ಅವಧಿಯಲ್ಲಿ ಕಾಪುವಿನಲ್ಲಿ ಸ್ಥಗಿತಗೊಂಡಿರುವ ಹಕ್ಕು ಪತ್ರ. 94ಸಿ.ಸಿಸಿ ವಿತರಣೆ ಕಾರ್ಯವನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಬೇಕು ಮತ್ತು ಕಾಪು ತಾಕೂಕಿನ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಪ್ಪೆಪಾದ ಬಳಿ ಸರಕಾರಿ ಜಮೀನಿನಲ್ಲಿ ಮನೆಕಟ್ಟಿಕೊಂಡು ವಾಸವಿದ್ದ ಬಡ ದಲಿತ ಮಹಿಳೆ ಪದ್ಮಬಾಯಿ ಎಂಬವರ ಮನೆಯನ್ನು ನೆಲಸಮ ಮಾಡಿದ ಅಧಿಕಾರಗಳ ವಿರುದ್ದ ಕ್ರಮಜರಗಿಸುವಂತೆ ಆಗ್ರಹಿಸಿ ಕಾಪುವಿನ ಮಾಜಿ ಶಾಸಕ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ತಹಾಶಿಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ” ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡುವುದು ಮಾತ್ರವಲ್ಲದೆ ಜನ ಸಮಾನ್ಯರಿಗೆ ಸಮಾಜಯಿಷಿ ನೀಡುತ್ತಿದೆ,ನಾಲ್ಕು ವರ್ಷದಿಂದ ಬಡ ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳಸಾಲ ಮನ್ನಾ ಮಾಡುತ್ತಿದೆ ,ರಸ್ತೆಯಲ್ಲಿ ಮಲಗುತ್ತಿರುವ,ಬಾಡಿಗೆ ಮನೆಯಲ್ಲಿರುವ ಬಡ ಕುಟುಂಬಗಳಿಗೆ ನೀವೆಶನ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ವಿನಯ್ ಕುಮಾರ್ ಸೊರಕೆ ಮಾತಾಡಿ ” ಶಿರ್ವದ ಬಡ ದಲಿತ ಮಹಿಳೆಗೆ ಆದ ಅನ್ಯಾಯವನ್ನು ಬಿಜೆಪಿ ಬೆಂಬಲಿಸಿ ದಲಿತ ವಿರೋಧ ಧೋರಣೆ ಅನುಸರಿಸುತ್ತಿದೆ ,ಬಡವರಿಗ ಮನೆ ನೀಡದೆ ವಂಚಿಸುತ್ತಿದೆ ಎಂದು ಅಕ್ರೋಶ ಹೊರಹಾಕಿದರು.
ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ,ಉತ್ತರ ಅಧ್ಯಕ್ಷ ಸಂತೋಷ್ ಕುಮಾರ್ ಪಕ್ಕಾಲ್,ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ,ಕಾಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ ರಮೀಜ್ ಹುಸೇನ್,ಜಿತೇಂದ್ರ ಪುಟಾರ್ಡೋ,ಶಿವಾಜಿ ಸುವರ್ಣ ಬೆಳ್ಳೆ,ಎಂ.ಪಿ ಮೈದಿನಬ್ಬ , ಹೈಬಾ ಡಿಬ್ಬ ಡಿಸೋಜ,ರಂಜನಿ ಹೆಗ್ಡೆ,ಮಹಮ್ಮದ್ ಫಾರೂಕ್ ಚಂದ್ರನಗರ ಮೊದಲಾದವರು ಉಪಸ್ಥಿತರಿದ್ದರು.




