ಭೂ ಸಂತ್ರಸ್ತರ ಜತೆ ಯುಪಿಸಿಎಲ್ ಅದಾನಿ ಮಾತುಕತೆ ಸಫಲ-ಒಂದು ತಿಂಗಳೊಳಗೆ ಸಮಸ್ಯೆ ಪರಿಹಾರ ಯತ್ನ-ಕಿಶೋರ್ ಆಳ್ವಾ-vishwanews24

Featured, ಉಡುಪಿ

ಭೂ ಸಂತ್ರಸ್ತರ ಜತೆ ಯುಪಿಸಿಎಲ್ ಅದಾನಿ ಮಾತುಕತೆ ಸಫಲ-ಒಂದು ತಿಂಗಳೊಳಗೆ ಸಮಸ್ಯೆ ಪರಿಹಾರ ಯತ್ನ-ಕಿಶೋರ್ ಆಳ್ವಾ

ಕಾಪು: ಯುಪಿಸಿಎಲ್ ಅದಾನಿ ಎಲ್ಲೂರು ಭಾಗದದಲ್ಲಿ ಎರಡನೇ ಹಂತದ ಪ್ರಾಜೆಕ್ಟ್ ನಿರ್ಮಾಣಕ್ಕೆ ಜಾಗ ಒತ್ತುವರಿ ಮಾಡಿಕೊಂಡಿದ್ದ ಭೂ ಸಂತ್ರಸ್ತರಿಗೆ ಉದ್ಯೋಗದ ಭರವಸೆ ಮತ್ತು ಉದ್ಯೋಗ ಯಾ ಪರಿಹಾರಧನ‌ನೀಡುವ ಕುರಿತಾದ ಭರವಸೆಗೆ ಐದು ವರ್ಷ ಕಳೆದುಹೋಗಿರುವ ಪರಿಣಾಮ ಅಲ್ಲಿನ‌ ಸಂತ್ರಸ್ತರು ಪತ್ರಿಕಾಗೋಷ್ಠಿ ನಡೆಸಿದ ಒಂದು ವಾರದೊಳಗೆ ಅದಾನಿ‌ ಸಂಸ್ಥೆ ಭೂ ಸಂತ್ರಸ್ತರ ಜತೆ ಮಾತುಕತೆ ನಡೆಸಬೇಕು ತಪ್ಪಿದ್ದಲ್ಲಿ ಜನವರಿ 29 ರಂದು ಅದಾನಿ ಯುಪಿಸಿಎಲ್ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.
ಈ ಪೈಕಿ ಕಳೆದ ಎರಡು ದಿನಗಳ ಹಿಂದೆ ಅದಾನಿ ಯುಪಿಸಿಎಲ್ ನ‌ ಜಂಟಿ‌ ನಿರ್ದೇಶಕ ಕಿಶೋರ್ ಅಳ್ವಾ,ಹಾಗೂ ರವಿ ಭೂ ಸಂತ್ರಸ್ತರ ಕಾಲೋನಿಗೆ ತೆರಳಿದ ಮಾತುಕತೆ ನಡೆಸಿದ್ದಾರೆ.
ಮುಂದಿನ ಒಂದು ತಿಂಗಳೊಳಗಾಗಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ ಭೂ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ಬಗ್ಗೆ ಭರವಸೆ ನೀಡಿದ್ದಾರೆ ಮತ್ತು ಫೆಬ್ರವರಿ ತಿಂಗಳಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಭೂಸಂತ್ರಸ್ತರು ಜನವರಿ29 ರಂದು ನಡೆಯುವ ಪ್ರತಿಭಟನೆ ಹಿಂಪಡೆದಿರುವುದಾಗಿ ಸಂತ್ರಸ್ತರೊಬ್ಬರಾದ ನಿತೇಶ್ ವಿಶ್ವನ್ಯೂಸ್24 ಗೆ ತಿಳಿಸಿದ್ದಾರೆ.
ವರದಿ: ಪುರುಷೋತ್ತಮ ಸಾಲಿಯಾನ್