ಮಂಗಳೂರು: ನೇತ್ರಾವತಿ ಸೇತುವೆ ಆತ್ಮಹತ್ಯೆ ತಡೆಬೇಲಿ ಮತ್ತು ಸಿಸಿ ಕ್ಯಾಮರಾ ಅಳವಡಿಕೆ : ಶಾಸಕ ವೇದವ್ಯಾಸ ಕಾಮತ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನೇತ್ರಾವತಿ ಸೇತುವೆ ಆತ್ಮಹತ್ಯೆ ತಡೆಬೇಲಿ ಮತ್ತು ಸಿಸಿ ಕ್ಯಾಮರಾ ಅಳವಡಿಕೆ : ಶಾಸಕ ವೇದವ್ಯಾಸ ಕಾಮತ್ – Vishwanews24

ಮಂಗಳೂರು: ನೇತ್ರಾವತಿ ನದಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ನಡೆಸುವವರ ಶೋಧ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಲಕ್ಷಾಂತರ ರೂ ಖರ್ಚಿನ ಹೊರೆಯಾಗುತ್ತಿದ್ದು ಇಂತಹ ಅನಗತ್ಯ ಖರ್ಚು ಉಳಿಸುವ, ಆತ್ಮಹತ್ಯೆ ನಡೆಸದಂತೆ ಮನಪರಿವರ್ತಿಸುವ ಸಲುವಾಗಿ ನೇತ್ರಾವತಿ ಸೇತುವೆಯುದ್ದಕ್ಕೂ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಅಳವಡಿಸಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಕುಂದಾಪುರ : ಬ್ಯಾಂಕುಗಳ ವಿಲೀನ ಮಾಡಿರುವುದು ದೇಶದ ಒಳಿತಿಗಾಗಿ : ಸಂಸದ ಬಿ ವೈ ರಾಘವೇಂದ್ರ -Vishwanews24

ಅವರು ಮುಡಾ ಅಭಿವೃದ್ಧಿ ಪ್ರಾಧಿಕಾರ 63 ಲಕ್ಷ ರೂ. ವೆಚ್ಚದಲ್ಲಿ ನೇತ್ರಾವತಿ ಸೇತುವೆಗೆ ನಿರ್ಮಿಸಿದ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕಾಮತ್ ಅವರು “ಜನ ಕೆಟ್ಟ ಸಂದರ್ಭದಲ್ಲಿ ನೇತ್ರಾವತಿ ಸೇತುವೆಯನ್ನೇ ಅವಲಂಬಿಸಿ ಆತ್ಮಹತ್ಯೆ ನಡೆಸುತ್ತಿದ್ದರು. ಒಂದು ವರ್ಷದಲ್ಲಿ ಅಂದಾಜು 10-15 ರಷ್ಟು ಮಂದಿ ಆತ್ಮಹತ್ಯೆಗೈದಿರುವ ಪ್ರಕರಣಗಳು ನಡೆದಿವೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಸಿದ್ದಾರ್ಥ್ ಕೂಡಾ ಆತ್ಮಹತ್ಯೆ ನಡೆಸಿರುವುದು , ಮಂಗಳೂರಿನ ಪಾಲಿಗೆ ನೇತ್ರಾವತಿ ಸೇತುವೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಆತ್ಮಹತ್ಯೆ ಸಂದರ್ಭ ಜಿಲ್ಲಾಡಳಿತ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆ , ಮೀನುಗಾರರು ಎಲ್ಲರೂ ಸೇರಿಕೊಂಡು ಶೋಧ ಕಾರ್ಯಕರ್ತರಿಗೆ ಲಕ್ಷಾಂತರ ವೆಚ್ಚ ಮಾಡಲಾಗುತ್ತಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ -Vishwanews24

ಇದು ಜಿಲ್ಲಾಡಳಿತಕ್ಕೆ ಹೊರೆಯಾಗಿ ಪರಿಣಮಿಸಿತ್ತು. ಇವೆಲ್ಲದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಯಾರು ಆತ್ಮಹತ್ಯೆ ನಡೆಸದಂತೆ ಶಾಶ್ವತ ಪರಿಹಾರವಾಗಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ವೀಣಾ ಮಂಗಳ, ಮುಡಾ ಕಮೀಷನರ್ ದಿನೇಶ್ ಕುಮಾರ್, ಕಂಕನಾಡಿ ಠಾಣಾಧಿಕಾರಿ ಅಶೋಕ್ ಕುಮಾರ್, ಮನಪಾ ನಾಮನಿರ್ದೇಶಿತ ಸದಸ್ಯ ಭಾಸ್ಕರ ಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಉಜಿರೆ: ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾದ ಯುವತಿಯ ಮೃತದೇಹ ಕಾಡಿನಲ್ಲಿ ಪತ್ತೆ -Vishwanews24