ಮಂಗಳೂರು-ಬಾಂದ್ರಾ ಟರ್ಮಿನಸ್ಗೆ ಶೀಘ್ರ ಹೊಸ ರೈಲು ಸೇವೆ ! vishwanews24
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ..
ಮಂಗಳೂರು-ಬಾಂದ್ರಾ ಟರ್ಮಿನಸ್ಗೆ ಶೀಘ್ರ ಹೊಸ ರೈಲು ಸೇವೆ !
ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್ ಮೂಲಕವಾಗಿ ಬಾಂದ್ರಾ ಟರ್ಮಿನಸ್ಗೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಪ್ರಸ್ತುತ ಮಂಗಳೂರು ಸೆಂಟ್ರಲ್ನಿಂದ ರೈಲು ಸಂಖ್ಯೆ 16622 ಸಾಪ್ತಾಹಿಕವಾಗಿ ಪ್ರತಿ ಶನಿವಾರ ರಾಮೇಶ್ವರಂಗೆ ತೆರಳಿ, ಸೋಮವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮರಳುತ್ತದೆ. ಸೋಮವಾರದಿಂದ ಶನಿವಾರ ವರೆಗೆ ಸುಮಾರು ಐದು ದಿನಗಳ ಕಾಲ ಜರ್ಮನ್ ತಂತ್ರಜ್ಞಾನದ ಎಲ್ಎಚ್ಬಿ (LHB) ಬೋಗಿಗಳನ್ನು ಒಳಗೊಂಡ ಸಂಪೂರ್ಣ ರೇಕ್ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲೇ ಖಾಲಿಯಾಗಿ ನಿಲ್ಲುತ್ತದೆ. ಈ ರೇಕಲ್ಲಿ 4 ಸಾಮಾನ್ಯ ಬೋಗಿ, 2 ಹವಾನಿಯಂತ್ರಿತ ಟು ಟಯರ್, 6 ತ್ರೀ ಟಯರ್, 6 ಸ್ಲೀಪರ್ ಹಾಗೂ 2 ಎಕಾನಮಿ ಬೋಗಿಗಳು ಸೇರಿವೆ.
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ – vishwanews24
ಈ ರೇಕ್ ಅನ್ನು ಉಪಯೋಗಿಸಿ ಮಂಗಳೂರು ಸೆಂಟ್ರಲ್ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ವಸಾಯ್ ರೋಡ್ ಮೂಲಕ ಬಾಂದ್ರಾ ಟರ್ಮಿನಸ್ ತನಕ ರೈಲು ಸೇವೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ರೇಕ್ ಬಾಂದ್ರಾ ಟರ್ಮಿನಸ್ನಿಂದ ವಾಪಸ್ ವಸಾಯ್ ರೋಡ್ ಮುಖಾಂತರ ಮಂಗಳೂರು ಸೆಂಟ್ರಲ್ಗೆ ಸಂಚರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿವೆ.
ನಾಲ್ಕು ದಿನಗಳ ರೈಲು ಮಾರ್ಗ ಲಭ್ಯ:
ಮಂಗಳೂರು ಸೆಂಟ್ರಲ್ ಮತ್ತು ವಸಾಯ್ ರೋಡ್ ನಡುವಿನ ಈ ಹೊಸ ರೈಲು ಸೇವೆಗೆ ಅಗತ್ಯವಾದ ರೈಲು ಮಾರ್ಗ (ರಹದಾರಿ) ಲಭ್ಯವಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗೆ ಸೂರತ್-ಮಂಗಳೂರು ಸಾಪ್ತಾಹಿಕ ರೈಲು ಸೇವೆ ಆರಂಭವಾದ ಬಳಿಕ ವಾರದಲ್ಲಿ 4 ದಿನಗಳ ಕಾಲ ಈ ರೈಲು ಮಾರ್ಗದಲ್ಲಿ ಅವಕಾಶವಿರುವುದಾಗಿ ಹೇಳಲಾಗಿದೆ.
ರಾಮಮಂದಿರ ದೇಣಿಗೆ ಅವ್ಯವಹಾರ: SIT ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ : ಪೇಜಾವರ ಶ್ರೀ – vishwanews24
ಈ ಲಭ್ಯವಿರುವ ಮಾರ್ಗವನ್ನು ಬಳಸಿಕೊಂಡು, ಪ್ರಸ್ತುತ ರಾಮೇಶ್ವರಂ-ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲಿನ ರೇಕ್ನ್ನೇ ಮಂಗಳೂರು-ವಸಾಯ್ ರೋಡ್-ಬಾಂದ್ರಾ ಟರ್ಮಿನಸ್ ಸೇವೆಗೆ ಬಳಸಬಹುದಾಗಿದೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜಾ ತಿಳಿಸಿದ್ದಾರೆ.
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಅನುಕೂಲ
ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಮುಂದಿನ ಕ್ರಮಗಳತ್ತ ಪ್ರಯಾಣಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.
ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು – vishwanews24
