ಮಂಗಳೂರು- ವೈದ್ಯರ ಎಡವಟ್ಟು : ಬಲಕಾಲಿನ ಬದಲು ಎಡಕಾಲಿಗೆ ಶಸ್ತ್ರಚಿಕಿತ್ಸೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ನೋವಿದ್ದ ಎಡಕಾಲಿನ ಬದಲು ಬಲಕಾಲಿಗೆ ಆಪರೇಶನ್ ಮಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಕಾಸರಗೋಡಿನ ಮಹಿಳೆಯೊಬ್ಬರು ಕೆಲದಿನದ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಅವರ ಬಲಕಾಲನ್ನು ಶಸಚಿಕಿತ್ಸೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗಿತ್ತು. ಆದರೆ ಆಪರೇಷನ್ ಮಾಡಿ ಮರಳಿ ಬರುವಾಗ ಎಡಗಾಲಿಗೆ ಆಪರೇಷನ್ ಆಗಿರುವುದು ಮನೆಯವರ ಗಮನಕ್ಕೆ ಬಂದಿದೆ.

ಕುಟುಂಬಿಕರಿಗೆ ಶಾಕ್‌: ಮಹಿಳೆಯ ಬಲ ಕಾಲು ನೋವಿದ್ದು, ಎಡಗಾಲು ಆಪರೇಷನ್‌ ಮಾಡಿದ್ದನ್ನು ಕಂಡು ಕುಟುಂಬಿಕರಿಗೆ ಗರ ಬಡಿದಂತಾಗಿತ್ತು. ಕೂಡಲೇ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸಿದಾಗ ಕಿರಿಯ ವೈದ್ಯರು ಎಡವಟ್ಟು ಮಾಡಿರುವುದು ಗೊತ್ತಾಗಿದೆ.

ಕ್ಷಮಾಪಣೆ, ಪರಿಹಾರ ಭರವಸೆ: ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು, ಹಿರಿಯ ವೈದ್ಯರು ಬಂದು ಮಹಿಳೆಯ ಕುಟುಂಬಿಕರ ಬಳಿ ಕ್ಷಮೆ ಕೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಮಹಿಳೆಯ ಆಸ್ಪತ್ರೆಯ ಖರ್ಚು, ವೆಚ್ಚ ಸೇರಿದಂತೆ ಆದ ಎಡವಟ್ಟಿಗೆ ಪರಿಹಾರವನ್ನು ನೀಡುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.