ಮೂಡಬಿದಿರೆ:  ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ತೆಗೆದುಕೊಂಡು ಯುವಕ ಪರಾರಿ – Vishwanews24

Featured, ದಕ್ಷಿಣ ಕನ್ನಡ

ಮೂಡಬಿದಿರೆ:  ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್  ತೆಗೆದುಕೊಂಡು ಯುವಕ ಪರಾರಿ

ಮೂಡಬಿದಿರೆ: ಬೈಕ್ ಮಾರಾಟಕ್ಕಿದೆ ಎಂದು ಯುವಕನೊರ್ವ ಓ ಎಲ್ ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದು, ಇದನ್ನು ನೋಡಿದ ಈಶಾನ್ ಶೆಟ್ಟಿ ಎಂಬಾತ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಅನ್ನು ತೆಗೆದುಕೊಂಡು ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.

ಅಕ್ಷಯ್ ಎಂಬವರು ತನ್ನ ಕೆಟಿಎಂ ಡ್ಯೂಕ್ ಬೈಕನ್ನು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದರು.

ಜು.16ರಂದು ಈಶಾನ್ ಶೆಟ್ಟಿ ಎಂಬಾತ ಕರೆ ಮಾಡಿ ಬೈಕ್ ಅನ್ನು ಖರೀದಿಸುವುದಾಗಿ ಹೇಳಿ ಸಂಜೆ ಶಿರ್ತಾಡಿ ಬಸ್ ತಂಗುದಾಣ ಬಳಿ ಬರಲು ಹೇಳಿದ್ದನು.

ಜೈನಮುನಿ ಹತ್ಯೆಯ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡ ಶಂಕೆ : ಸಿಬಿಐ ತನಿಖೆಗೆ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹ – Vishwanews24

ಅದರಂತೆ ಅಕ್ಷಯ್ ಬೈಕ್ ತಗೊಂಡು ಶಿರ್ತಾಡಿ ಬಸ್ ತಂಗುದಾಣ ಬಳಿಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶಾನ್ ಶೆಟ್ಟಿ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಅನ್ನು ಪಡೆದುಕೊಂಡು ಹೋದವನು ಮರಳಿಬಾರದೆ ವಂಚಿಸಿದ್ದಾನೆ.

ಈ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ : ಯದ್ವಾತದ್ವಾ ಬಸ್ ಓಡಿಸುವ ಬರದಲ್ಲಿ ಸರ್ಕಾರಿ ಬಸ್‌ಗೆ ಢಿಕ್ಕಿ ಹೊಡೆದ ಖಾಸಗಿ ಬಸ್ – Vishwanews24

 

Leave a Reply