ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯಕ್ಕೆ ಹೋದವರು ಈಗ ಧರ್ಮೋಪದೇಶ ನೀಡುತ್ತಿದ್ದಾರೆ : ಯೋಗಿ ಆದಿತ್ಯನಾಥ್‌ – vishwanews24

Featured, ರಾಷ್ಟ್ರ ನ್ಯೂಸ್

ರಾಮಮಂದಿರ ವಿರೋಧಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ : ಯೋಗಿ ಆದಿತ್ಯನಾಥ್‌

ಲಖ್ನೋ(ಉ.ಪ್ರ) : ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯಕ್ಕೆ ಹೋದವರು ಈಗ ನಂಬಿಕೆಯ ಬಗ್ಗೆ ಧರ್ಮೋಪದೇಶ ನೀಡುತ್ತಿರುವುದು ನಗೆಪಾಟಲಿಗೆ ಈಡಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಪರೋಕ್ಷವಾಗಿ ಸಮಾಜವಾದಿ ಪಕ್ಷದ ಕುರಿತು ವ್ಯಂಗ್ಯವಾಡಿದ್ದಾರೆ.

ತಮ ಕ್ಷೇತ್ರವಾದ ಗೋರಖ್‌ಪುರ ನಗರಕ್ಕೆ 995 ಕೋಟಿ ರೂ.ಗೂ ಹೆಚ್ಚು ಮೌಲ್ಯದ 14 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ನಂತರ ಮಾತನಾಡಿದ ಅವರು, 2017 ಕ್ಕಿಂತ ಮೊದಲು ಗಲಭೆಗಳು ಸಾಮಾನ್ಯವಾಗಿದ್ದವು, ಅರಾಜಕತೆ ಉತ್ತುಂಗದಲ್ಲಿತ್ತು. ಹೋಳಿ, ವಿಜಯದಶಮಿ, ದುರ್ಗಾ ಪೂಜೆ ಮತ್ತು ರಾಮನವಮಿಯ ಸಮಯದಲ್ಲಿ ಹೇಗೆ ಗಲಭೆಗಳು ಭುಗಿಲೆದ್ದವು.

ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್​ಕಾರ್ಟ್​ : 1.8 ಲಕ್ಷ ರೂ. ಪರಿಹಾರಕ್ಕೆ ಮುಂಬೈನ ಗ್ರಾಹಕ ನ್ಯಾಯಾಲಯ ಆದೇಶ – vishwanews24

ಜನಾಷ್ಟಮಿ ಆಚರಣೆಗಳು ಅಥವಾ ಕನ್ವರ್‌ ಯಾತ್ರೆ ನಡೆಯಲು ಬಿಡುತ್ತಿರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಗ ನಂಬಿಕೆಯ ವಿಷಯಗಳ ಮೇಲೆ ದಾಳಿ ಮಾಡುತ್ತಿದ್ದವರು ಈಗ ಆ ನಂಬಿಕೆಯ ಶ್ರೇಷ್ಠ ಪ್ರತಿಪಾದಕರು ಎಂದು ಬಿಂಬಿಸಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಮತ್ತು ಕ್ಷೇತ್ರದ ಆಡಳಿತವನ್ನು ವಹಿಸಿಕೊಳ್ಳುವವರೆಗೂ ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಯಾರೂ ಹೂಡಿಕೆ ಮಾಡಲು ಸಿದ್ಧರಿರಲಿಲ್ಲ. ರಾಜ್ಯದಲ್ಲಿ 29 ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲು ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್‌‍ ಸರ್ಕಾರಗಳನ್ನು ಸಹ ದೂಷಿಸಿದರು.

ಉಡುಪಿ: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್ ಖಂಡನೆ – vishwanews24

Leave a Reply