ಶ್ರೀಕ್ಷೇತ್ರ ಮಂದಾರಬೈಲು- ಮಹಾಕುಂಭಾಭಿಷೇಕ- ದೈವಗಳ ಪುನಃ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ಬಿಡುಗಡೆ.-Vishwanews24

Featured, ರಾಜ್ಯ ನ್ಯೂಸ್

ಶ್ರೀಕ್ಷೇತ್ರ ಮಂದಾರಬೈಲು- ಮಹಾಕುಂಭಾಭಿಷೇಕ- ದೈವಗಳ ಪುನಃ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀಕ್ಷೇತ್ರ ಮಂದಾರ ಬಯಲು ಕೊಂಚಾಡಿ ಇಲ್ಲಿನ ದಿನಾಂಕ  ಮೇ,10 ರಿಂದ 16 ಮೇ 2021 ವರೆಗೆ ನಡೆಯಲಿರುವ ನೂತನ ನಿರ್ಮಿತ ಶ್ರೀಮಂದಾರ ಧರ್ಮಚಾವಡಿಯ ಗೃಹಪ್ರವೇಶ, ನಾಗಪ್ರತಿಷ್ಠೆ, ಶ್ರೀ ರಕ್ತೇಶ್ವರಿ ಶ್ರೀ ಮಂತ್ರದೇವತೆ ಶ್ರೀಗುಳಿಗ ದೈವಗಳ ಪುನಃಪ್ರತಿಷ್ಠೆ ಮಹಾಕುಂಭಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಮತ್ತು ವರ್ಷಾವಧಿ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಆದಿತ್ಯವಾರ ನಡೆಯಿತು.
ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಪ್ರಕಾಶ್ ಪಂಡಿತ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಡಾ.ಜಗದೀಶ್ ಶೆಟ್ಟಿ ಬಿಜೈ,ದಿನೇಶ್ ಶೆಟ್ಟಿ ಬಿಜೈ,ಶ್ರೀಮತಿ ಶುಭ ವಿಶ್ವನಾಥ್ ಶೆಟ್ಟಿ ಶೆಟ್ಟಿಗಾರ್,ಕಿರಣ್ ಪಕ್ಕಳ ಪೆರ್ಮಂಕಿಗುತ್ತು,ವಿನಯ ಆರ್ ಶೆಟ್ಟಿ ಸಾಂತೂರು ಪರಾರಿ,ವಾಸ್ತುತಜ್ಞ ಮತ್ತು ಇಂಜಿನಿಯರ ಯತೀಶ್ ಹೊಸಗದ್ದೆ,ದೂಮಪ್ಪ‌ಮೂಲ್ಯ ಉಪಸ್ಥಿತರಿದ್ದರು.