SKPA ಕಾಪು ವಲಯ ಕೊಡಗು ನಿರಾಶ್ರಿತರಿಗೆ ಸಹಾಯ ಧನ‌ ಹಸ್ತಾಂತರ.

Featured, ಉಡುಪಿ

SKPA ಕಾಪು ವಲಯ ಕೊಡಗು ನಿರಾಶ್ರಿತರಿಗೆ ಸಹಾಯ ಧನ‌ ಹಸ್ತಾಂತರ.

ಕಾಪು: ಕೊಡಗು ಮಡಿಕೇರಿಯಲ್ಲಿ ಭಾರಿ ಮಳೆಯಿಂದಾಗಿ ಕೊಚ್ಚಿ ಹೋಗಿದ್ದ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಕಾಪು ವಲಯದ ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸಹಾಯಧನದ ಚೆಕ್ಕನ್ನು ಕಾಪು ತಾಲೂಕ್ ತಹಶಿಲ್ದಾರ್ ಗುರುಸಿದ್ದಯ್ಯ ರ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಕಾಪು ವಲಯ ಅಧ್ಯಕ್ಷ ಉದಯ ಮುನ್ಕೂರ್,ಉಪಾಧ್ಯಕ್ಷ ಮನೋಹರ್ ಕುಂದರ್ ಏರ್ಮಾಳು,ಕಾರ್ಯದರ್ಶಿ ವಿರೇಂದ್ರ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಕುರ್ಕಾಲ್,ಕಾಪು ವಲಯ ಕೋಶಾಧಿಕಾರಿ ಸಂತೋಷ್ ಕಾಪು,ರವಿಕುಮಾರ್ ಕಟಪಾಡಿ,ಸಚಿನ್ ಉಚ್ಚಿಲ ಸೇರಿದಂತೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.