ಕಾಪು ಹೋಟೆಲ್ ಮಯೂರ: ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಣೆ.-vishwanews24

Featured, ಉಡುಪಿ

ಕಾಪು ಹೋಟೆಲ್ ಮಯೂರ: ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಣೆ.

ಕಾಪು: ಕೊರೋನಾ ಸಂಕಷ್ಟ ಸಂದರ್ಭಗಳನ್ನರಿತು ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಮೊದಲ ಹಂತದ ಅಕ್ಕಿ ಸಮೇತ ಪಡಿತರ ಕಿಟ್ ವಿತರಿಸಿದರು.
ದುಡಿಯುವ ನೂರಾರು ಕೈಗಳಿಂದಾಗಿ ಸಂಸ್ಥೆ ಬೆಳೆಯಲು ಸಾದ್ಯ,ಕೊರೋನಾ ಲಾಕ್-ಡೌನ್ ಕಾರಣದಿಂದ ಪ್ರಸ್ತುತ ಎರಡು ವರ್ಷದಿಂದ ಹೋಟೆಲ್ ಉದ್ಯ ಅವನತಿಯ ಹಾದಿ ಹಿಡಿಯುತ್ತಿದ್ದರು ತಮ್ಮ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿಗಳ ಜತೆ ನಿಲ್ಲುವುದು ಮಾಲಕರಾದವರ ಕರ್ತವ್ಯ ಹಾಗೂ ಧರ್ಮ ಹೀಗಾಗಿ ಅನುಕೂಲವಾಗುವಂತೆ ಪಡಿತರ ಕಿಟ್ ವಿತರಿಸಿ ಸಹಕಾರ ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಸಂತೋಷ ಶೆಟ್ಟಿ ಕಳತ್ತೂರು ತಿಳಿಸಿದರು.
ಕಳೆದ ಕೊರೋನಾ ಸಮಯದಲ್ಲಿ ಪೋಲಿಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್,ಹ್ಯಾಂಡ್ ಗ್ಲೌಸ್ ನೀಡಿ ಸಹಕರಿಸಿದ್ದರು.
ಈ ಸಂಧರ್ಭದಲ್ಲಿ ಮಾಲಕರಾದ ನಿತ್ಯಾನಂದ ಆರ್ ಶೆಟ್ಟಿ ಕಳತ್ತೂರು, ಸಂಸ್ಥೆಯ ಮ್ಯಾನೇಜರ್ ನವಿನ್,ವಿನಯ್ ಉಪಸ್ಥಿತರಿದ್ದರು.